ಎಂದೋ ಕಂಡ ಆ ಮುಖ ಇಂದೂ ಕಾಡುತ್ತಿರಬಹುದು; ಇಂದು ಕಂಡ ಆ ನಗು ಎಂದೋ ಕಂಡವರನ್ನು ನೆನಪಿಸುತ್ತಿರಬಹುದು; ನಮ್ಮ ಬದುಕು ನಿರಂತರವಾಗಿ ಯಾವುದೋ ಒಂದು ಅಗೋಚರ ಸೆಳೆತದ ಕಡೆಗೆ ಧಾವಿಸುತ್ತಲೇ ಇರುತ್ತದೆ.
ಬರವಣಿಗೆಯೂ ಅಂಥದೊಂದು ಸೆಳೆತವೇ. ನಮ್ಮ ಭಾವನೆಗಳನ್ನು ಹದವಾಗಿಯೂ ಸುಂದರವಾಗಿಯೂ ಪ್ರಕಟಪಡಿಸಲು ಲಲಿತಪ್ರಬಂಧ ಉಚಿತವಾದ ಪ್ರಕಾರ. ನೀವೂ ಲಲಿತಪ್ರಬಂಧವನ್ನು ಬರೆದು ನಮಗೆ ಕಳುಹಿಸಬಹುದು.
ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾವಾಣಿ ‘ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ಇದರಲ್ಲಿ ಮಹಿಳೆಯರೆಲ್ಲರೂ ಭಾಗವಹಿಸಬಹುದು.
**
ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್ 20, 2016
*
ಬಹುಮಾನಗಳ ವಿವರ:
ಮೊದಲನೆಯ ಬಹುಮಾನ ₹ 7,500
ಎರಡನೆಯ ಬಹುಮಾನ ₹ 5,000
ಮೂರನೆಯ ಬಹುಮಾನ ₹ 2.500
*
ಸ್ಪರ್ಧೆಯ ನಿಯಮಗಳು
* ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.
* ಸ್ವತಂತ್ರ ರಚನೆಯಾಗಿರಬೇಕು.
* ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ ಪ್ರಬಂಧ ಪ್ರಕಟ/ಪ್ರಸಾರ ಆಗಿರಕೂಡದು.
* ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
* ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
* ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.
* ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.
* ನುಡಿ, ಬರಹ ಅಥವಾ ಯೂನಿಕೋಡ್ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು. ಇ–ಮೇಲ್: bhoomika@prajavani.co.in
* ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.
* ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
* ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.
* ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.