ಖಾನೇಷುಮಾರಿ
ಲೇ: ಶಿವಾನಂದ ಕರ್ಕಿ
ಪುಟ: 206, ಬೆಲೆ: ₹150
ಪ್ರ: ಧ್ವನಿ ಪ್ರಕಾಶನ, ಸಹಕಾರ ಭವನ, ಆಜಾದ್ ರಸ್ತೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ
**
ಲೇಖಕನೊಬ್ಬ ತನ್ನ ಬದುಕಿನ ಕೆಲವು ಅನುಭವಗಳನ್ನು ನಿರೂಪಿಸುವ ಮೂಲಕ, ತನ್ನ ಪ್ರದೇಶದ ಕಥನವನ್ನೂ ಕಟ್ಟಿಕೊಡುವ ಶೈಲಿಗೆ ಶಿವಾನಂದ ಕರ್ಕಿ ಅವರ ‘ಖಾನೇಷುಮಾರಿ’ ಒಳ್ಳೆಯ ಉದಾಹರಣೆ. ಆತ್ಮಕಥೆಯ ಟಿಪ್ಪಣಿಗಳಂತೆ ಕಾಣಿಸುವ ಈ ಕೃತಿಯ ಕಿರುಬರಹಗಳು, ಒಟ್ಟಂದದಲ್ಲಿ ಮಲೆನಾಡಿನ ಪರಿಸರ ಮತ್ತು ಜೀವನವಿಧಾನವನ್ನು ಚಿತ್ರಿಸುವ ಪರಿ ಕುತೂಹಲಕರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.