ಮಹಾನ್ ಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು. ಮಹಾನ್ ಪುರುಷರು ಸಾರಿದ ತತ್ವ, ಸಂದೇಶ ಜಗತ್ತಿಗೆ ಅನ್ವಯವಾಗುತ್ತದೆ. ಜನತೆ ದ್ವೇಷ ಅಸೂಯೆ, ವೈಮನಸ್ಸು ತೊಡೆದು ಹಾಕಿ ಸಾಮರಸ್ಯದಿಂದ ಬದುಕು ಸಾಗಿಸಬೇಕು ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಕುಮಾರವ್ಯಾಸ, ವಾಲ್ಮೀಕಿ ಪ್ರತಿಪಾದಿಸಿದ ತತ್ವಗಳನ್ನು ಪಾಲಿಸು ವುದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ತೀ.ನರಸೀಪುರದ ಬೌದ್ಧಬಿಕ್ಕು ಬೋಧಿದತ್ತ ಭಂತೇಜಿ ಆಶೀರ್ವಚನ ನೀಡಿ, ಪಂಚಶೀಲ ತತ್ವಗಳನ್ನು ಪಾಲಿಸುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು. ಬೇಲೂರಿನ ಭಂತೇಜಿ ಬುದ್ಧಚಿತ್ತ, ಚನ್ನರಾಯಪಟ್ಟಣ ಭಂತೇಜಿ ಧರ್ಮಚಿತ್ತ ಸಾನ್ನಿದ್ಯ ವಹಿಸಿದ್ದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ಸಾಹಿತಿ ರಾಜಶೇಖರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ.ಎನ್.ಮಂಜೇಗೌಡ, ಮುಖಂಡರಾದ ಲಕ್ಷ್ಮಯ್ಯ, ಆರ್. ಶ್ರೀನಿವಾಸ್, ಸಿ.ಎನ್.ಮಂಜುನಾಥ್, ಎಚ್.ಎಂ.ಗೌಡಯ್ಯ, ಶಿವಶಂಕರಕುಂಟೆ, ಶಿವಯ್ಯ, ಸಿದ್ದಲಿಂಗಯ್ಯ, ಚಂದ್ರಪ್ಪ, ಮಹಾದೇವಮ್ಮ, ರಾಮಚಂದ್ರ, ಕೆ.ನರಸಿಂಹಮೂರ್ತಿ, ಎನ್.ಬಿ. ಮಂಜಣ್ಣ, ಸಿ.ಜಿ.ಸೋಮಶೇಖರ್ ಇತರರು ಇದ್ದರು. ಆಲದಹಳ್ಳಿ ವೆಂಕಟೇಶ್ ಸ್ವಾಗತಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಂಚಶೀಲ ಪಾದಯಾತ್ರೆ ನಡೆಯಿತು.