ಎಚ್.ಎ.ಎಲ್.ನಲ್ಲಿ ‘ಮಿಗ್’ ವಿಮಾನ ತಯಾರಿಕೆ, ಸರಬರಾಜು ಆರಂಭ
ನವದೆಹಲಿ, ಜ. 4– ಹಿಂದೂಸ್ತಾನ್ ಏರೋನಾಟಿಕಲ್ ಸಂಸ್ಥೆಯು (ಎಚ್.ಎ.ಎಲ್.) ಸಂಪೂರ್ಣವಾಗಿ ತನ್ನಿಂದಲೇ ತಯಾರಿಸಲಾದ ಎಂ.ಐ.ಜಿ. ವಿಮಾನಗಳ ಸರಬರಾಜನ್ನು ಆರಂಭಿಸಿದೆ.
*
ವಿಶ್ವ ಪ್ರವಾಸಿ ವರ್ಷದ ಅಂಗವಾಗಿ ಈ ವರ್ಷ ದಸರಾ ಉತ್ಸವ
ನವದೆಹಲಿ, ಜ. 4– ಅಂತರರಾಷ್ಟ್ರೀಯ ಪ್ರವಾಸಿ ವರ್ಷದ (1967) ಸಂಬಂಧದಲ್ಲಿ ವಿಶೇಷವಾಗಿ ಏರ್ಪಡಿಸಲಾಗುವ ಉತ್ಸವಗಳ ಅಂಗವಾಗಿ ಈ ವರ್ಷ ದಸರಾ ಉತ್ಸವವನ್ನು ಸಾಂಪ್ರದಾಯಕ ವೈಭವದಿಂದ ಆಚರಿಸಲು ಮೈಸೂರು ಸರ್ಕಾರವನ್ನು ಪ್ರಾರ್ಥಿಸಲಾಗಿದೆ.
ಈ ಸಂದರ್ಭದಲ್ಲಿ ಮೈಸೂರು ಮಹಾರಾಜರ ಸಹಕಾರ ಕೋರಲಾಗಿದೆ.
*
ಕಾಂಗ್ರೆಸ್ಸಿಗೆ ವೀರಣ್ಣ ಗೌಡ, ವೆಂಕಟಪ್ಪ, ಹುಚ್ಚಮಾಸ್ತಿ ಗೌಡರ ರಾಜೀನಾಮೆ
ಬೆಂಗಳೂರು, ಜ. 4– ಮೈಸೂರು ಪ್ರದೇಶ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರುಗಳಾದ ಶ್ರೀ ಎಚ್.ಕೆ. ವೀರಣ್ಣ ಗೌಡ ಮತ್ತು ಶ್ರೀ ವಿ. ವೆಂಕಟಪ್ಪನವರು ತಮ್ಮ 40 ವರ್ಷಗಳ ಕಾಂಗ್ರೆಸ್ ಬಾಂಧವ್ಯವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರೂ, ಪ್ರದೇಶ ಕಾಂಗ್ರೆಸ್ಸಿನ ಮಾಜಿ ಕಾರ್ಯದರ್ಶಿಯೂ ಆದ ಶ್ರೀ ಎನ್. ಹುಚ್ಚಮಾಸ್ತಿ ಗೌಡರೂ ಕಾಂಗ್ರೆಸ್ ಬಿಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.