ನದಿ ತೀರದ ಇನ್ನೊಂದು ದಡದಲ್ಲಿರುವ (ಬಳ್ಳಾರಿ ಜಿಲ್ಲಾ ವ್ಯಾಪ್ತಿ ಅಂಚಿನಲ್ಲಿ) ಹಾವಂಶಿ–ಶಾಕಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೇ, ರಾಣೆಬೆನ್ನೂರು, ಬ್ಯಾಡಗಿ ಮತ್ತಿತರ ಪಟ್ಟಣಗಳಿಗೆ ನೀರು ಪೂರೈಸಲು ಮುದೇನೂರು ಬಳಿ ಬಾಂದಾರು ನಿರ್ಮಾಣಕ್ಕೆ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮುತುವರ್ಜಿ ವಹಿಸಿದ್ದಾರೆ’ ಎಂದರು.
ಹೆಗ್ಗೇರಿ ಹೂಳು: ‘ಹಾವೇರಿಯ ಹೆಗ್ಗೇರಿ ಕೆರೆಯ ಹೂಳು ತೆಗೆಯುವ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಮೂಲಕ ಸುಮಾರು ₹15 ಕೋಟಿ ವೆಚ್ಚದಲ್ಲಿ ಹೂಳೆತ್ತಲಾಗುವುದು. ಇನ್ನೊಂದೆಡೆ ತುಂಗಾ ಮೇಲ್ದಂಡೆ ಯೋಜನೆ ಕಾಮ ಗಾರಿಯು ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಹೆಗ್ಗೇರಿ ಕೆರೆ ತುಂಬಿಸಲಾಗುವುದು. ಕುಡಿಯವ ನೀರಿನ ಜೊತೆ ದೋಣಿ ವಿಹಾರ, ಗಾಜಿನ ಮನೆ, ಪಕ್ಷಿ ವಿಹಾರಕ್ಕೆ ಕೆರೆಯ ಮಧ್ಯೆ ನಡುಗಡ್ಡೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಗಳ ಮೂಲಕ ಪ್ರವಾಸೋದ್ಯಮ ತಾಣವಾಗಿ ಹೆಗ್ಗೇರಿ ಕೆರೆಯನ್ನು ರೂಪಿಸಲಾಗುವುದು’ ಎಂದರು.
ಅಪರಾಧ: ‘ಒಬ್ಬ ಜನಪ್ರತಿನಿಧಿಯಾಗಿ ತನ್ನ ಬುದ್ಧಿಯನ್ನು ಕೈಗೆ ನೀಡುವುದು ಹಾಗೂ ಬೇಕಾಬಿಟ್ಟಿ ಹೇಳಿಕೆ ನೀಡು ವುದು ಅನುಚಿತ ವರ್ತನೆಯಾಗಿದೆ. ಒಂದೆಡೆ ವೈದ್ಯರ ಕೊರತೆ ಸಾಕಷ್ಟಿದೆ. ಈ ನಡುವೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಪರಾಧ’ ಎಂದು ಸಂಸದ ಅನಂತಕುಮಾರ ಹೆಗಡೆ ವೈದ್ಯರನ್ನು ಥಳಿಸಿರುವ ಪ್ರಕರಣದ ಕುರಿತು ಅವರು ಪ್ರತಿಕ್ರಿಯಿಸಿದರು.