ಕಳೆದ ಏಪ್ರಿಲ್ ಒಂದರಿಂದ ನವೆಂಬರ್ ಒಂಬತ್ತರವರೆಗೆ ಉಳಿತಾಯ ಖಾತೆಯಲ್ಲಿ ಜಮಾವಣೆಗೊಂಡಿರುವ ಮೊತ್ತದ ಬಗ್ಗೆ ವಿವರ ಸಲ್ಲಿಸಲು ಎಲ್ಲಾ ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿರುವುದಕ್ಕೆ ಕೆ.ವಿ.ವಾಸು ಆಕ್ಷೇಪ ವ್ಯಕ್ತಪಡಿಸಿದ್ದಾರೆ (ವಾ.ವಾ., ಜ. 10).
ಆದರೆ ಅವರು ಬ್ಯಾಂಕಿನ ಈ ಕ್ರಮದ ಬಗ್ಗೆ ಏಕೆ ಆತಂಕಿತರಾಗಿದ್ದಾರೋ ಗೊತ್ತಾಗಲಿಲ್ಲ. ಉಳಿತಾಯ ಖಾತೆದಾರನ ಹಣ ನ್ಯಾಯಬದ್ಧ ದುಡಿಮೆಯಿಂದ, ತೆರಿಗೆ ಪಾವತಿ ನಿಯಮಗಳಿಗೆ ಅನುಗುಣವಾಗಿದ್ದರೆ ಅದರಲ್ಲಿ ಭಯಪಡುವುದೇನಿದೆ? ಮೇಲಾಗಿ ಈ ಕ್ರಮವು ಬ್ಯಾಂಕಿಗೆ ಸಂಬಂಧಿಸಿದ್ದು.