ಒಣ ಪರೋಟ, ಬೇಳೆ ಇಲ್ಲದ ಸಾರು, ಒಣ ರೊಟ್ಟಿ ಕೊಡುತ್ತಾರೆ ಎಂದು ಯಾದವ್ ಫೇಸ್ಬುಕ್ನಲ್ಲಿ ಆರೋಪಿಸಿದ್ದಾರೆ. ಇದು ನಿಜವೇ ಆಗಿದ್ದಲ್ಲಿ, ನಮ್ಮ ಯೋಧರಿಗೆ ತಮ್ಮ ನೋವನ್ನು ಹೇಳಿಕೊಳ್ಳುವಂತೆಯೂ ಇಲ್ಲ, ಅನುಭವಿಸುವಂತೆಯೂ ಇಲ್ಲ ಎಂಬಂತಹ ದುಃಸ್ಥಿತಿ ಇದೆ ಎಂದಾಯಿತು.
ಯೋಧರನ್ನು ಇಂಥ ಶೋಚನೀಯ ಸ್ಥಿತಿಗೆ ತಂದೊಡ್ಡುವ ಅಧಿಕಾರಿಗಳಿಗೆ ಶಿಕ್ಷೆ ನೀಡುವವರಾರು? ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಲೇಬೇಕು ಎಂಬ ಕೂಗು ಎಲ್ಲೆಡೆ ಮೊಳಗುವಂತಾಗಬೇಕು. ನಮ್ಮ ಸೈನಿಕರಿಗೆ ಶತ್ರುಗಳ ಸಮಸ್ಯೆ ಮಾತ್ರ ಸಾಕು. ಬೇರೆ ಯಾವ ಸಮಸ್ಯೆಗಳೂ ಅವರ ಬಳಿ ಸುಳಿಯದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ.
-ರವಿಚಂದ್ರ ಬಾಯರಿ, ಕೊಕ್ಕರ್ಣೆ