ಉತ್ತರ ಪ್ರದೇಶದ
ಉತ್ತರಾಧಿಕಾರಕ್ಕಾಗಿ
ಉತ್ತರ-ದಕ್ಷಿಣವಾಗಿ,
ರಾಜ್ಯ ತತ್ತರಿಸುತ್ತಿದ್ದರೂ
ಉತ್ತರ ಮಾತ್ರ ಸಿಗುತ್ತಿಲ್ಲ
ಎಂಬ ಭ್ರಮೆಯಲ್ಲಿ,
ನಿಮ್ಮೆತ್ತರವ ಮರೆತು
ಕಚ್ಚಾಡುತ್ತಿರುವ ಅಪ್ಪ-ಮಕ್ಕಳೇ,
ನಿಮ್ಮಂತಹವರು ಹುಟ್ಟುತ್ತಾರೆಂದು
ಊಹಿಸಿ, ನಮ್ಮ ಪಂಪ ಮಹಾಕವಿಯು
ಆದಿಪುರಾಣದಲ್ಲಿ
‘ರಾಜ್ಯ ವ್ಯಾಮೋಹವು ತಂದೆ ಮಕ್ಕಳಲ್ಲಿ,
ಸಹೋದರರಲ್ಲಿ ವಿರಸವನ್ನುಂಟು
ಮಾಡುತ್ತದೆ’ ಎಂದು ಸಾವಿರ ವರ್ಷಗಳ
ಹಿಂದೆಯೇ ಬರೆದಿದ್ದಾನೆ,
ಉತ್ತರ ಸಿಗಬಹುದು
ಒಮ್ಮೆ ಓದಿ ನೋಡಿ.
–ಜೆ.ಬಿ.ಮಂಜುನಾಥ, ಪಾಂಡವಪುರ