ದೇವರು, ಮಠ, ಮಂದಿರಗಳ ಹೆಸರಿನಲ್ಲಿ ವಿಜ್ಞಾನವನ್ನು ಮರೆಯದಿರೋಣ ಎಂದು ಹೇಳಿದ್ದ ವಿವೇಕಾನಂದರ ದೇಶದಲ್ಲಿ ಇಂದು ದೇವಸ್ಥಾನ, ಮಠಗಳು ವ್ಯಾಪಾರಿ ನೆಲೆಗಳಾಗಿವೆ. ಮೂಢನಂಬಿಕೆ, ಕಂದಾಚಾರ ಹೆಚ್ಚುತ್ತಿದೆ.
ವಿವೇಕಾನಂದರನ್ನು ಹಿಂದೂ ಧರ್ಮದ ಪ್ರಚಾರಕ ಎಂದು ಬಿಂಬಿಸುತ್ತಿರುವ ಈ ಕಾಲಘಟ್ಟದಲ್ಲಿ, ಅವರ ಸಮೂಹಮುಖಿ ಚಿಂತನೆಗಳನ್ನು ಬೆಳೆಸಿ ಹಳ್ಳಿಹಳ್ಳಿಗೂ ಪಸರಿಸುವ ಕಾರ್ಯ ಸಫಲವಾಗಬೇಕಾಗಿದೆ. ವಿವೇಕಾನಂದರು ಶಿಕ್ಷಿತ ಸಮಾಜದ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ.
-ಸತೀಶ್ ಕೆ., ದಾವಣಗೆರೆ