ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಆಂಜನೇಯ ದೇವಾಲಯದಲ್ಲಿ ಗುರು ವಾರ ರಾಷ್ಟ್ರೀಯ ಯುವ ದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಹೆಸರಿನಲ್ಲಿ ವಿಶೇಷ ಪೂಜೆ ನಡೆಸ ಲಾಯಿತು.
ದೇವಾಲಯದಲ್ಲಿರುವ ಆಂಜನೇಯ ಹಾಗೂ ಕೇಶವ ದೇವರಿಗೆ ದೇವಾಲ ಯದ ಅರ್ಚಕ ಜನಾರ್ದನ್ಭಟ್ ನೇತೃತ್ವದಲ್ಲಿ ಪಂಚಾರಾತ್ರಗಮ ಮಾದರಿ ಯಲ್ಲಿ ವಿವಿಧ ಅಭಿಷೇಕ ನಡೆಸಿ, ಆಕರ್ಷಕ ಅಲಂಕಾರಗೊಳಿಸಿ, ರಾಷ್ಟ್ರೀಯ ಯುವ ದಿನದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ ನಡೆಸಿಸಲಾಯಿತು.
ಮೋದಿ ಅವರಿಗೆ ದೀರ್ಘಾಯುಷ್ಯ ನೀಡುವಂತೆ ಪ್ರಾರ್ಥಿಸಿ ಹೋಮ ಹವನಗಳನ್ನು ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಜಗನ್ನಾಥ್, ಭಜನೆ ಮಂಡಳಿ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪೂಜಾ ಕೈಂಕರ್ಯದಲ್ಲಿ ಉಪಸ್ಥಿತರಿದ್ದರು. ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.