ಈ ಯೋಜನೆಯು ಕೇಂದ್ರದ ಮಾನವ ಸಂಪನ್ನೂಲ ಅಭಿವೃದ್ಧಿ ಇಲಾಖೆ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಇಲಾಖೆಯ ಯೋಜನೆಯಾಗಿದ್ದು 2022ರ ವೇಳೆಗೆ ಒಂದು ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಹೊಂದಿದ್ದು ಈ ಯೋಜನೆಯ ಮೊದಲ ಕೌಶಲ್ಯ ತರಬೇತಿಯಾಗಿ ನಮ್ಮ ಕಾಲೇಜಿನಲ್ಲಿ ಮೆಟಲ್ ಆರ್ಕ್ ವೆಲ್ಡರ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು.
ಸಾಹಿತಿ ಅಣ್ಣಾಜಿ ಪಡತಾರೆ, ಬೆಳಗಲಿಯ ಮುರಾರ್ಜಿ ವಸತಿಶಾಲೆಯ ಶಿಕ್ಷಕಿ ಬಿ.ಎ. ಹೂಗಾರ, ಎಚ್.ವೈ. ಭಜಂತ್ರಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಭಾಸ ರಾಠೋಡ, ವಿಜಯಕುಮಾರ ಕುಳಲಿ, ಎಸ್.ಎಮ್. ಸುತಾರ, ಪ್ರವೀಣ ಅವರಾದಿ ಮತ್ತು ಮಹಾಲಿಂಗೇಶ ಪಟ್ಟಣಶೆಟ್ಟಿ ಇದ್ದರು. ಯು.ಡಿ. ಹಾದಿಮನಿ ಸ್ವಾಗತಿಸಿದರು. ರಾಚಣ್ಣ ಕಾಳಗಿ ಮತ್ತು ಯಮುನಪ್ಪ ಹೂಗಾರ ನಿರೂಪಿಸಿದರು. ಪರಶುರಾಮ ದಳವಾಯಿ ವಂದಿಸಿದರು.