ರಾಮನಗರ: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 61ನೇ ಜನ್ಮ ದಿನವನ್ನು ನಗರದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಬಿಎಸ್ ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್ ಮಾತನಾಡಿ ‘ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲಿದ್ದಾರೆ’ ಎಂದರು.
ಬಹುಜನ ವಿದ್ಯಾರ್ಥಿ ಸಂಘದ ಸಲಹೆಗಾರ ಟ್ರೂಪ್ಲೆನ್ ಹರೀಶ್ ಮಾತನಾಡಿ, ‘ದೇಶದಲ್ಲಿ ತೃತೀಯ ರಂಗವನ್ನು ಕಟ್ಟುವ ಪ್ರಭಾವಿ ವ್ಯಕ್ತಿಗಳಲ್ಲಿ ಮಾಯಾವತಿ ಒಬ್ಬರು. ಈಗಾಗಲೇ ಭಾರತದಲ್ಲಿ ಅಸಂವಿಧಾನಿಕ ಪದ್ಧತಿ ವ್ಯವಸ್ಥಿತವಾಗಿ ಅಳವಡಿಸ ಲಾಗುತ್ತಿದೆ.
ಜನರು ಇದರ ಬಗ್ಗೆ ಹೀಗಲೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ದೇಶದಲ್ಲಿ ದಲಿತ ಸಮುದಾಯ ಮತ್ತೆ ಅಪಾಯದ ಪರಿಸ್ಥಿತಿಗೆ ತಲುಪಲಿದೆ’ ಎಂದು ತಿಳಿಸಿದರು. ಬಿಎಸ್್್ ಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ. ಸ್ವಾಮಿ, ಸಂಯೋಜಕ ಬಾಬು, ನಗರ ಘಟಕದ ಅಧ್ಯಕ್ಷ ಬಾಲಗೇರಿಮುರುಗೇಶ್, ಕಾರ್ಯದರ್ಶಿ ಸುಬ್ರಹ್ಮಣಿ, ತಾಲ್ಲೂಕು ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ನಾರಾಯಣಪ್ಪ, ಪದಾಧಿಕಾರಿಗಳಾದ ಶ್ರೀನಿವಾಸರಾವ್, ದೇವರಾಜು, ವಿಜಯ್, ಶ್ರೀನಿವಾಸ್, ಬಿವಿಎಸ್ ಸಂಯೋಜಕ ಎಸ್.ಕುಮಾರ್, ವೆಂಕಟೇಶ್ ಇತರರು ಇದ್ದರು.