ಅಫಜಲಪುರ: ಜ.23 ರಂದು ಅಫ ಜಲಪುರ ನಗರದಲ್ಲಿ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆ ಯಲಿದ್ದು, ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ.ನದಾಫ್ ಅವರು ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ನದಾಫ್, ಜ.23ರಂದು ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಅಫಜಲಪುರ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಅದಕ್ಕಾಗಿ ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅವರು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಅವರು ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಲೀಕಯ್ಯ ಗುತ್ತೇದಾರ ಅವರಿಗೆ ಸಮ್ಮೇಳನದ ಆಹ್ವಾನ ಪತ್ರಿಕೆ ನೀಡಲಾಯಿತು.
ಈ ಭಾಗದ ನೆಲ ಜಲ ಕುರಿತು ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತಿದೆ. ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಶಿವರಾಜ ಪಾಟೀಲ ಅವರನ್ನು ಸಮ್ಮೇಳದನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಸಾಪ ಕಾರ್ಯದರ್ಶಿ ಪ್ರಭು ಪುಲಾರಿ, ರಾಹುಲ್ ಸಿಂಪಿ, ಗೌರವ ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಚವಡಿಹಾಳ ಪದಾಧಿಕಾರಿಗಳಾದ ಶರಣಯ್ಯ ಹಿರೇಮಠ, ಶ್ರೀಮಂತ ಬಿರಾದಾರ, ಶಿವಾನಂದ ಸರಸಂಬಿ, ನಾಮದೇವ ಕಡಕೋಳ, ಶಂಕ್ರೆಪ್ಪಾ ಮಣೂರ, ಮಲ್ಲಿಕಾರ್ಜುನ ಯಂಕಂಚಿ, ರಮೇಶ ಮುಜಗೊಂಡ, ಚಂದ್ರ ಜನಶೆಟ್ಟಿ, ಶಾಮಸುಂದರ ಮಠಪತಿ, ಸುಭಾಷ್ ರೂಗಿ, ರಾಹುಲ ಸಿಂಪಿ, ಬಾಬುಮಿಯಾ ಪುಲಾರಿ, ಪ್ರಕಾಶ ಕುಂಬಾರ, ಮಹೇಶ ಅಂಜುಟಗಿ ಇದ್ದರು.