<p><strong>ಬೆಂಗಳೂರು: </strong>12ನೇ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ಬದುಕು–ವಚನಗಳ ಕುರಿತಾದ ಚಿತ್ರ ‘ಅಲ್ಲಮ’ ಇದೇ ತಿಂಗಳ 26ರಂದು ತೆರೆ ಕಾಣಲಿದೆ.</p>.<p>ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ 2016ರಲ್ಲಿ ಅಲ್ಲಮ ಸಿನಿಮಾ ನಾಮನಿರ್ದೇಶನಗೊಂಡು ಸುದ್ದಿಯಾಗಿತ್ತು.</p>.<p>ಟಿ.ಎಸ್. ನಾಗಾಭರಣ ನಿರ್ದೇಶನದ ಈ ಸಿನಿಮಾದಲ್ಲಿ ಧನಂಜಯ್, ಮೇಘನಾ ರಾಜ್, ‘ಸಂಚಾರಿ’ ವಿಜಯ್ ಹಾಗೂ ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.</p>.<p>ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಬಾಪು ಪದ್ಮನಾಭ ಅವರ ಸಂಗೀತವಿದೆ. ಶ್ರೀಹರಿ ಎಲ್.ಖೋಡೆ ಚಿತ್ರದ ನಿರ್ಮಾಪಕರು.</p>.<p>ಜನವರಿ 26ರಂದು ರಾಜ್ಯದಾದ್ಯಂತ ಅಲ್ಲಮ ಚಿತ್ರ ಬಿಡುಗಡೆಯಾಗಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>12ನೇ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ಬದುಕು–ವಚನಗಳ ಕುರಿತಾದ ಚಿತ್ರ ‘ಅಲ್ಲಮ’ ಇದೇ ತಿಂಗಳ 26ರಂದು ತೆರೆ ಕಾಣಲಿದೆ.</p>.<p>ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ 2016ರಲ್ಲಿ ಅಲ್ಲಮ ಸಿನಿಮಾ ನಾಮನಿರ್ದೇಶನಗೊಂಡು ಸುದ್ದಿಯಾಗಿತ್ತು.</p>.<p>ಟಿ.ಎಸ್. ನಾಗಾಭರಣ ನಿರ್ದೇಶನದ ಈ ಸಿನಿಮಾದಲ್ಲಿ ಧನಂಜಯ್, ಮೇಘನಾ ರಾಜ್, ‘ಸಂಚಾರಿ’ ವಿಜಯ್ ಹಾಗೂ ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.</p>.<p>ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಬಾಪು ಪದ್ಮನಾಭ ಅವರ ಸಂಗೀತವಿದೆ. ಶ್ರೀಹರಿ ಎಲ್.ಖೋಡೆ ಚಿತ್ರದ ನಿರ್ಮಾಪಕರು.</p>.<p>ಜನವರಿ 26ರಂದು ರಾಜ್ಯದಾದ್ಯಂತ ಅಲ್ಲಮ ಚಿತ್ರ ಬಿಡುಗಡೆಯಾಗಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>