ಉಡುಪಿ: ಅಲೆವೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ₹1.20 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು ಮಂಗಳ ವಾರ ಭೂಮಿಪೂಜೆ ನೆರವೇರಿಸಿದರು.
ಪ್ರಗತಿನಗರ, ಹೊನ್ನೆಕೋಡಿ, ಕಲ್ಲಕು ಮೇರಿ, ನಡು ಅಲೆವೂರು, ಜೋಡುರಸ್ತೆ ಮತ್ತು ಮಾರ್ಪಳ್ಳಿ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಐಟಿಡಿಪಿ ಮತ್ತು ವಿವಿಧ ಯೋಜನೆಗಳಡಿ ಅನುದಾನ ಮಂಜೂ ರಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಕಲ್ಯಾಣ ಯೋಜನೆಯಡಿ ಮಂಜೂ ರಾದ ಪ್ರಗತಿ ನಗರ ಅಂಗನವಾಡಿ ಕಟ್ಟಡಕ್ಕೆ ಶಿಲಾ ನ್ಯಾಸ ಮತ್ತು ಮಾರ್ಪಳ್ಳಿ ಕೊರಂಗ್ರಪಾಡಿ ಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರ ಣಗೊಂಡ ರಸ್ತೆಯನ್ನು ಉದ್ಘಾಟಿಸಿದರು.
ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾಂಗ್ರೆಸ್್ ಮುಖಂಡ ಅಲೆವೂರು ಹರೀಶ್ ಕಿಣಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬೇಬಿರಾಜೇಶ್, ಜಯ ಲಕ್ಷ್ಮೀ, ಸ್ವಾತಿ ಪ್ರಭು, ಪುಷ್ಪ ಅಂಚನ್, ಆನಂದ ಕೊರಂಗ್ರಪಾಡಿ, ಹರೀಶ್ ಸೇರಿಗಾರ್, ಸುಧಾಕರ ಪೂಜಾರಿ ನಂದ ಗೋಕುಲ, ಜಯಕರ ಪೂಜಾರಿ, ಸುಂದರ ನಾಯಕ್, ಪಿಡಿಒ ಬೂದ ಪೂಜಾರಿ, ಹರಿಕೃಷ್ಣ ಶಿವತ್ತಾಯ, ಹೆಬ್ಸೂರ್, ಡಿ.ವಿ. ಹೆಗಡೆ ಇದ್ದರು.