ದೇವರನ್ನು ನೋಡಿದ್ಯಾ...?
ಇಲ್ಲ....
ನಾನು ನೋಡಿದ್ದೀನಿ...ಹಾಗಾದರೆ, ಆ ಬಾಲಕ ನೋಡಿರುವ ದೇವರು ಯಾವುದು. ಕಾಯಕದಲ್ಲೇ ಕೈಲಾಸ ಕಾಣುವವರ ದೇವರು ಯಾರು? ಟ್ರೇಲರ್ ನೋಡುತ್ತಿದ್ದಂತೆ ಇಂಥ ಸಾಕಷ್ಟು ಪ್ರಶ್ನೆಗಳು ಏಳುತ್ತವೆ.
ಪೌರಕಾರ್ಮಿಕರ ತವಕ–ತಲ್ಲಣಗಳನ್ನು ‘ಅಮರಾವತಿ’ ಮೂಲಕ ತೆರೆಯ ಮೇಲೆ ತರುವ ಪ್ರಯತ್ನ ನಡೆದಿದೆ.
ಜಟ್ಟ’ ಹಾಗೂ ‘ಮೈತ್ರಿ’ ಚಿತ್ರಗಳ ನಿರ್ದೇಶಕರಾದ ಬಿ.ಎಂ.ಗಿರಿರಾಜ್ ಅವರ ಸಿನಿಮಾ ‘ಅಮರಾವತಿ’. ಅಚ್ಯುತ್ ಕುಮಾರ್, ನೀನಾಸಂ ಅಶ್ವಥ್ ಮುಂತಾದವರ ಅಭಿನಯವಿದೆ.
ಮ್ಯಾನ್ ಹೋಲ್ನಲ್ಲಿ ಇಳಿದ ಕಾರ್ಮಿಕರು ಅಲ್ಲಿನ ವಿಷಗಾಳಿ ಸೇವಿಸಿ ಸಾವನ್ನಪ್ಪಿದ ಘಟನೆಗಳು ಸಾಕಷ್ಟು.ಮ್ಯಾನ್ಹೋಲ್ನಿಂದ ಹೊರಗಡೆ ಬಂದ ಮೇಲೆ ಅವರು ಅನುಭವಿಸುವ ಕಷ್ಟ ಯಾರಿಗೂ ತಿಳಿಯುವುದೇ ಇಲ್ಲ. ಇದೇ ಚಿತ್ರದ ಅಂತರಾಳ.