ಸರದಿ ಪ್ರಕಾರ ಅವರಿಗೆ ದೂರವಾಣಿಯ ಮೂಲಕ ತಿಳಿಸಲಾಗುವುದು ಎಂದು ತೊಗರಿ ಧಾನ್ಯ ಶ್ರೇಣಿ ಪರೀಕ್ಷಕ ಮತ್ತು ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಚಂದಾವರಿ ಹೇಳಿದರು.
ತೊಗರಿ ಧಾನ್ಯವನ್ನು ಎಪಿ ಎಂಸಿಗೆ ಬೆಂಬಲ ಬೆಲೆ ಕೊಡುವ ರೈತರು ಗ್ರಾಮ ಲೆಕ್ಕಾಧಿಕಾರಿಯಿಂದ ಧೃಡೀಕ ರಣ, ಖಾತೆ ಉತಾರ, ಚಾಲತಿ ಉತಾರ, ಆಧಾರ ಕಾರ್ಡ್ ಮತ್ತು ಐಎಫ್ಎಸ್ಎ ಕೋಡ್ ಹೊಂದಿದ ಬ್ಯಾಂಕ್ ಪಾಸ್ ಬುಕ್ ಝರಾಕ್ಸ ಪ್ರತಿ ಮತ್ತು ತೊಗರಿಯ ಮಾದರಿ (ಶ್ಯಾಂಪಲ್) ತಂದು ಖರೀದಿ ಕೇಂದ್ರದಲ್ಲಿ ಕೊಡಬೇಕು ಎಂದು ತೊಗರಿ ಧಾನ್ಯದ ಶ್ರೇಣಿಯನ್ನು ಗುರುತಿ ಸುವ ಅಧಿಕಾರಿ ಚಂದಾವರಿ ಹೇಳಿದರು.
ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿ ಸಂಜೀವ್, ಟಿಎಪಿಸಿಎಂಎಸ್ ಎಸ್.ಎನ್ ಅಂಗಡಿ, ತೊಗರಿ ಧಾನ್ಯ ಗುಣಮಟ್ಟ ಪರೀಕ್ಷಕ ಪುಂಡಲೀಕ ಯಂಕಂಚಿ ಮತ್ತು ಎಪಿಎಂಸಿಯ ಗುರುಲಿಂಗಯ್ಯ ಪೂಜಾರ ರೈತರ ತೊಗರಿಯ ತೂಕ ಮಾಡಿಸುತ್ತಿದ್ದರು. ತಾಲ್ಲೂಕಿನ ಕೆರೂರ, ಬೆಳಕೊಪ್ಪ, ನೀಲಗುಂದ, ಮುಷ್ಟಿಗೇರಿ ಹಾಗೂ ಮುತ್ತಲಗೇರಿಗಳಿಂದ ರೈತರು ತೊಗರಿ ತೆಗೆದುಕೊಂಡು ಬಂದಿದ್ದರು.