ಪಾಂಡುರಂಗರಾವ್ ಅವರ ಕೈ ಚಳಕ ಕಂಡು ಆರ್.ಕೆ.ಲಕ್ಷ್ಮಣ್ ಅವರಂತಹ ಶ್ರೇಷ್ಠರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ನೇಹಜೀವಿ ಪಾಂಡುರಂಗರಾವ್ ಅವರ ರೇಖಾ ಚಿತ್ರವನ್ನು ಆರ್.ಕೆ.ಲಕ್ಷ್ಮಣ್ ಅವರೇ ತಮ್ಮ ಕೈಯಾರ ಅವರಿಗೆ ಬಿಡಿಸಿ ಕೊಟ್ಟಿದ್ದಾರೆ.
ಪಾಂಡುರಂಗರಾವ್ ಕರ್ನಾಟಕ ವ್ಯಂಗ್ಯಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿ ಕೂಡ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
ಕ್ರೀಡಾರಂಗದಲ್ಲೂ ಮಹತ್ವಪೂರ್ಣ ಸಾಧನೆಗೈದಿರುವ ಅವರು, ಬಿಲಾಯ್ ಉಕ್ಕಿನ ಕಾರ್ಖಾನೆಯ ಕ್ರಿಕೆಟ್ ತಂಡ, ಮಧ್ಯಪ್ರದೇಶದ ವಿಭಾಗೀಯ ಮಟ್ಟದ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಾರೆ.
ಅಂತರ್ಜಾಲದಲ್ಲಿ ಅನೇಕ ಸುಂದರವಾದ ಬ್ಲಾಗ್ಗಳನ್ನು ಸೃಷ್ಟಿಸಿದ್ದಾರೆ. ಫೇಸ್ಬುಕ್ನಲ್ಲೂ ಸಕ್ರಿಯರಾಗಿದ್ದಾರೆ. ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಮಾನವೀಯ ವ್ಯಕ್ತಿತ್ವ ಅವರದು.
**
ವ್ಯಂಗ್ಯಚಿತ್ರ ಪ್ರದರ್ಶನ
ಬಿ.ವಿ. ಪಾಂಡುರಂಗರಾವ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ವಿದ್ಯಾರಣ್ಯಪುರದ ಹಿರಿಯ ನಾಗರಿಕ ವೇದಿಕೆ ಸಂಸ್ಥೆಯ ಆವರಣದಲ್ಲಿ ಜ.20ರಂದು (ಶುಕ್ರವಾರ) ಬೆಳಿಗ್ಗೆ11ಕ್ಕೆ ಏರ್ಪಡಿಸಲಾಗಿದೆ. ಅಂದು ಸಂಜೆ 6ಕ್ಕೆ ಅವರ ವ್ಯಂಗ್ಯಚಿತ್ರಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಕೂಡ ನಡೆಯಲಿದೆ.
ಅವರ 100 ವ್ಯಂಗ್ಯಚಿತ್ರಗಳನ್ನೊಳಗೊಂಡ ಈ ಪ್ರದರ್ಶನದಲ್ಲಿ ರಾಜಕೀಯ, ಸಾಮಾಜಿಕ, ಪರಿಸರ, ತಿಳಿ ಹಾಸ್ಯ, ಕ್ರೀಡೆ, ಜಲಸಂಕಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವ ಅನೇಕ ವ್ಯಂಗ್ಯಚಿತ್ರಗಳ 49ನೇ ಪ್ರದರ್ಶನ ಇದಾಗಿದೆ.
**
ಇಂದಿನ ವ್ಯಂಗ್ಯಚಿತ್ರಕಾರರು ವಾಸ್ತವ ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಚಿತ್ರವನ್ನು ಬರೆದ ಮಾತ್ರಕ್ಕೆ ಯಾರೂ ವ್ಯಂಗ್ಯಚಿತ್ರಕಾರರಾಗಲು ಸಾಧ್ಯವಿಲ್ಲ. ಸತತ ಪ್ರಯತ್ನದಿಂದ ಮಾತ್ರವೇ ಯಶಸ್ಸು ನಮ್ಮದಾಗುತ್ತದೆ
–ಪಾಂಡುರಂಗರಾವ್, ವ್ಯಂಗ್ಯಚಿತ್ರಕಾರ