ಕಳೆದ ಕೆಲವು ತಿಂಗಳುಗಳಿಂದ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯ ಪಡಿತರದಾರರಿಗೆ ಉಚಿತ ಗೋಧಿಯ ಬದಲು ರಾಗಿ ವಿತರಣೆ ಮಾಡಲಾಗುತ್ತಿದೆ. ಬಡವರಿಗೆ ಇದು ಸಂತೋಷ ತರುವ ಬದಲು ಸಂಕಟ ತಂದಿದೆ. ಏಕೆಂದರೆ ಈ ರಾಗಿ ಕಲ್ಲು, ಮಣ್ಣು, ದೂಳಿನಿಂದ ಕೂಡಿದೆ. ಇದನ್ನು ನೋಡಿದರೆ ಸರ್ಕಾರಕ್ಕೆ ಕಣ್ಣಿಲ್ಲ ಎಂಬುದು ಸಾಬೀತಾದಂತಾಗಿದೆ ಎಂದು ಜನ ದೂರುತ್ತಿದ್ದಾರೆ.
ಉಚಿತವಾಗಿ ನೀಡಿದ ಮಾತ್ರಕ್ಕೆ ಅದು ಬಳಕೆಗೆ ಯೋಗ್ಯವೋ ಅಲ್ಲವೋ ಎಂದು ಪರೀಕ್ಷಿಸದೆ ವಿತರಿಸುವುದು ಯಾವ ನ್ಯಾಯ? ಇನ್ನು ಮುಂದಾದರೂ ಬಳಕೆ ಯೋಗ್ಯ ರಾಗಿ ವಿತರಿಸಲು ಸರ್ಕಾರ ಮುಂದಾಗಬೇಕು.
-ಶಿವಮೂರ್ತಿ, ಪಾಂಡೋಮಟ್ಟಿ, ಚನ್ನಗಿರಿ ತಾಲ್ಲೂಕು