ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಹನನ ನಿಲ್ಲಲಿ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಭೂಬಿಸಿ ಏರುತ್ತಿದೆ, ವಾಯುಮಾಲಿನ್ಯ ಏರುತ್ತಿದೆ ಎಂಬೆಲ್ಲಾ ಕೂಗಿನ ಮಧ್ಯೆ, ನಮ್ಮ ಅರಣ್ಯ ಇಲಾಖೆ ಚಿಕ್ಕಮಗಳೂರು ಜಿಲ್ಲೆಯ ನೆಡುತೋಪು ಮತ್ತು ಮೀಸಲು ಅರಣ್ಯದಲ್ಲಿರುವ ಸುಮಾರು 50 ಸಾವಿರ ಮರಗಳನ್ನು ಕಡಿಯಲು ಮುಂದಾಗಿದೆ (ಪ್ರ.ವಾ., ಜ. 18). ಅದಕ್ಕೆ ಇಲಾಖೆ ‘ಹೆಚ್ಚೇನಿಲ್ಲ, 7- 8 ಸಾವಿರ ಮರ ಹೋಗಬಹುದು ಅಷ್ಟೆ...’ ಎಂದು ಸಬೂಬು ನೀಡಿದೆ!

ಬಿಸಿಲಿನಲ್ಲಿ ಜನ- ಜಾನುವಾರು, ವಾಹನಗಳು, ಗೂಡಂಗಡಿಗಳು ಎಲ್ಲದಕ್ಕೂ ಮರದ ನೆರಳು ಬೇಕೇಬೇಕು. ಮರಗಳ ಇಂತಹ ನೂರಾರು ಉಪಯೋಗಗಳಿಗಿಂತ ಅವು ಉಂಟುಮಾಡುವ ಅನನುಕೂಲಗಳೇ ಅಧಿಕಾರಿಗಳಿಗೆ ಎದ್ದುತೋರುತ್ತವೆ! ಮರಗಳನ್ನು ಕಡಿಯದೆ ಹಾಗೇ ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನೂ ನಡೆಸಿಕೊಂಡು ಹೋಗುವಂತಹ ತಂತ್ರಜ್ಞಾನ ನಮ್ಮಲ್ಲಿ ಇಲ್ಲವೇ?
-ಸರೋಜಾ ಪ್ರಕಾಶ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT