ದೆಹಲಿ ಪೊಲೀಸ್ ಇಲಾಖೆಯಲ್ಲಿ ಟ್ರೇನಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಕರ್ನಾಟಕದ ಯುವಕ ಎಸ್.ತಿಪ್ಪೇಸ್ವಾಮಿ ಆತ್ಮಹತ್ಯೆಗೆ, ಅವರಿಗೆ ಹಿಂದಿ ಭಾಷೆ ಬಾರದಿದ್ದರಿಂದ ಮೇಲಧಿಕಾರಿಗಳು ನೀಡುತ್ತಿದ್ದ ಕಿರುಕುಳವೂ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದು ತೀವ್ರ ಮನಕಲಕುವ ವಿಷಯ.
ಹಿಂದಿ ಭಾಷಿಕರ ಇಂಥ ಧೋರಣೆಯನ್ನು ರಾಷ್ಟ್ರಮಟ್ಟದ ತರಬೇತಿ ಶಿಬಿರಗಳಲ್ಲಿ, ಸಭೆಗಳಲ್ಲಿ ಭಾಗವಹಿಸಿದಾಗ ಗಮನಿಸಿದ್ದೇನೆ. ತಿಪ್ಪೇಸ್ವಾಮಿಯವರ ವಿಷಯವನ್ನು ನಮ್ಮ ಸರ್ಕಾರವು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಪ್ರಸ್ತಾಪಿಸಿ, ಹೊರ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಈ ರೀತಿ ಕಿರುಕುಳ ಆಗದಂತೆ, ಅಲ್ಲಿನ ಭಾಷೆ ಕಲಿತು ಬಳಸಲು ಸಾಕಷ್ಟು ಕಾಲಾವಕಾಶ ನೀಡುವಂತೆ ಆಗ್ರಹಿಸಬೇಕು.
-ವೆಂಕಟೇಶ ಮಾಚಕನೂರ, ಧಾರವಾಡ