ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ

Last Updated 19 ಜನವರಿ 2017, 20:11 IST
ಅಕ್ಷರ ಗಾತ್ರ

ಕಣ್ಣೂರು : ಬಿಜೆಪಿ ಕಾರ್ಯಕರ್ತನ ಕೊಲೆ
ತಲಚೇರಿ, ಕೇರಳ(ಪಿಟಿಐ):
ಕಣ್ಣೂರು ಜಿಲ್ಲೆಯ ಧರ್ಮಡಂನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಇರಿದು ಕೊಲೆ ಮಾಡಿರುವ  ಘಟನೆ ನಡೆದಿದೆ. ಆಂಡಲೂರು ಬಿಜೆಪಿ  ಸ್ಥಳೀಯ ಘಟಕ ಅಧ್ಯಕ್ಷ ಸಂತೋಷ್‌ ಕೊಲೆಯಾದವರು. ಘಟನೆ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದ್ದು  ಕಣ್ಣೂರು ಜಿಲ್ಲೆಯಲ್ಲಿ ಗುರುವಾರ ಬಂದ್‌ ಆಚರಿಸಿದೆ.

***
ಬಜೆಟ್‌ : ಮಾಹಿತಿ ಕೇಳಿದ ಆಯೋಗ
ನವದೆಹಲಿ (ಪಿಟಿಐ): 
ಕೇಂದ್ರ ಬಜೆಟ್‌ ಮುಂದೂಡಲು 2012ರಲ್ಲಿ ಸರ್ಕಾರ ಅನುಸರಿಸಿದ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಚುನಾವಣಾ ಆಯೋಗವು ಸಂಪುಟ ಕಾರ್ಯಾಲಯಕ್ಕೆ ಸೂಚಿಸಿದೆ. ಈ ಸಂಬಂಧ ಗುರುವಾರ ಮತ್ತೊಂದು ಪತ್ರ ಬರೆದಿರುವ ಆಯೋಗ, ಶನಿವಾರ ಬೆಳಿಗ್ಗೆಯ ಒಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಬಜೆಟ್‌ ಮುಂದೂಡಲು ಅನುಸರಿಸಿದ ನಿಯಮಗಳ ಜೊತೆಗೆ ಬಜೆಟ್‌ ಸಿದ್ಧತೆ ಮತ್ತು ಮಂಡಿಸುವ ಪ್ರಕ್ರಿಯೆಯ ವಿವರಗಳನ್ನೂ ನೀಡುವಂತೆ  ಅದು ಕೇಳಿದೆ.

***
ಲಷ್ಕರ್–ಎ– ತಯಬಾ ಕಮಾಂಡರ್‌  ಸಾವು
ಶ್ರೀನಗರ:
ಉತ್ತರ ಕಾಶ್ಮೀರದ ಬಂಡಿಪೊರ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಗುರುವಾರ ಗುಂಡಿನ ಕಾಳಗದಲ್ಲಿ ಲಷ್ಕರ್–ಎ– ತಯಬಾದ ಪ್ರಾದೇಶಿಕ ಕಮಾಂಡರ್ ಅಬು ಮುಸೈಬ್ ಹತನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT