‘ಭಾರತೀಯ ಸಂಸ್ಕೃತಿಯಲ್ಲಿ ಸತಿಪದ್ಧತಿ ಇಲ್ಲ. ಮುಸ್ಲಿಂ ಆಕ್ರಮಣಕಾರರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಜೀವ ತೆಗೆದುಕೊಂಡಿರಬಹುದು’ ಎಂಬ ಎಸ್.ಎಲ್.ಭೈರಪ್ಪನವರ ಅಭಿಪ್ರಾಯವನ್ನು (ಪ್ರ.ಜಾ., ಜ. 20) ಓದುತ್ತಿದ್ದಂತೆಯೇ, ಮಹಾಭಾರತದ ಮಾದ್ರಿ ನೆನಪಾದಳು.
ಪಾಂಡುರಾಜನ ಮಡದಿ ಮಾದ್ರಿಯು ಗಂಡನ ಚಿತೆಯನ್ನೇರಿದ ಕಾಲಘಟ್ಟದಲ್ಲಿ ಭರತಖಂಡದಲ್ಲಿ ಮುಸ್ಲಿಂ ದೊರೆಗಳ ರಾಜ್ಯಭಾರವಾಗಲಿ, ಆಕ್ರಮಣದ ಭೀತಿಯಾಗಲಿ ಇರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ವ್ಯವಸ್ಥೆಯ ಜೊತೆಜೊತೆಗೆ ಲಿಂಗ ತಾರತಮ್ಯವೂ ಒಳಗೊಂಡು ರೂಪುಗೊಂಡಿದ್ದ ಸತಿ ಪದ್ಧತಿಯು ಹೆಣ್ಣನ್ನು ಉರಿಯುವ ಚಿತೆಯತ್ತ ತಳ್ಳುತ್ತಿದ್ದ ಸಾವಿರಾರು ಘಟನೆಗಳು ಇತಿಹಾಸದ ಉದ್ದಕ್ಕೂ ದಾಖಲಾಗಿವೆ.
-ಸಿ.ಪಿ.ನಾಗರಾಜ, ಬೆಂಗಳೂರು