‘ಸಿನಿಮಾ ರಂಗದಲ್ಲಿ ನನ್ನ ಅಸ್ತಿತ್ವ ಉಳಿಯಲು ದ್ವಂದ್ವಾರ್ಥದ ಸಂಭಾಷಣೆ ಅನಿವಾರ್ಯ’ ಎಂಬ ಚಿತ್ರ ನಿರ್ದೇಶಕ ಗಾಲಿ ಲಕ್ಕಿ ಅವರ ಹೇಳಿಕೆ (ಪ್ರ.ವಾ., ಚಂದನವನ– ಜ. 20) ಬೇಜವಾಬ್ದಾರಿತನದ್ದಷ್ಟೇ ಅಲ್ಲ ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿದೆ.
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತುಮಕೂರಿನಲ್ಲಿ ಪೊಲೀಸ್ ಅಧಿಕಾರಿಯಿಂದಲೇ ಮಾನಸಿಕ ಅಸ್ವಸ್ಥೆ ಮೇಲೆ ಇತ್ತೀಚೆಗೆ ಇಂಥ ನೀಚ ಕೃತ್ಯ ನಡೆದಿದೆ. ಪರಿಸ್ಥಿತಿ ಹೀಗಿರುವಾಗ ಕೇವಲ ತಮ್ಮ ಅಸ್ತಿತ್ವ ಉಳಿಯಬೇಕು ಹಾಗೂ ಗಲ್ಲಾಪೆಟ್ಟಿಗೆ ತುಂಬಿದರೆ ಸಾಕು ಎಂಬ ಮನೋಭಾವ ಪ್ರಶ್ನಾರ್ಹ.
ಜನಸಾಮಾನ್ಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರು ದ್ವಂದ್ವಾರ್ಥವುಳ್ಳ ಸಿನಿಮಾಗಳನ್ನು ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬೇಕಾಗಿದೆ.
-ನರಸಿಂಹರಾಜು ಹೆಗ್ಗೆರೆ, ತುಮಕೂರು