ಬೆಂಗಳೂರು: ‘ಪ್ರಜಾವಾಣಿ’ ಕ್ವಿಜ್ ಬೆಂಗಳೂರು ವಲಯಮಟ್ಟದ ಸ್ಪರ್ಧೆಗೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಪ್ರಶ್ನೆಗಳಿಗೆ ಉತ್ತರಿಸಿದ ಮಕ್ಕಳು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ. ತಿಮ್ಮೇಗೌಡ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ಸಂಘಟಿಸಿರುವ ಈ ಸ್ಪರ್ಧೆಯಲ್ಲಿ ಇಂದು ಬೆಂಗಳೂರು ವಲಯ ಸ್ಪರ್ಧೆ ನಡೆಯುತ್ತಿದ್ದು, ಮಧ್ಯಾಹ್ನ 2ಕ್ಕೆ ರಾಜ್ಯಮಟ್ಟದ ಫೈನಲ್ ಸ್ಪರ್ಧೆ ನಡೆಯಲಿದೆ.
ಕ್ವಿಜ್ ಸ್ಪರ್ಧೆ ವಲಯವಾರು ಜನವರಿ ೪ರಂದು ಮೈಸೂರಿನಿಂದ ಆರಂಭವಾಗಿ ಒಟ್ಟು ಒಂಬತ್ತು ವಲಯಗಳಲ್ಲಿ ಸ್ಪರ್ಧೆ ನಡೆಸಲಾಗಿದೆ.
ಫೈನಲ್ನಲ್ಲಿ ವಿಜೇತ ಮಕ್ಕಳಿಗೆ ಹಿರಿಯ ಹಾಕಿಪಟು ಅರ್ಜುನ್ ಹಾಲಪ್ಪ ಹಾಗೂ ಚಿತ್ರನಟ ಚೇತನ್ ಅವರು ಪ್ರಶಸ್ತಿ ವಿತರಿಸಲಿದ್ದಾರೆ.