ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಗೆ ಆಗ್ರಹಿಸಿ ಮೆರವಣಿಗೆ

Last Updated 21 ಜನವರಿ 2017, 4:59 IST
ಅಕ್ಷರ ಗಾತ್ರ

ಇಂಗಳೇಶ್ವರ (ಬಸವನಬಾಗೇವಾಡಿ): ಗ್ರಾಮದ ರೇಣುಕಾಚಾರ್ಯ ವಿದ್ಯಾವರ್ಧಕ ಸಂಘದಲ್ಲಿ ಮಹೇಶ ಶಿವಪ್ಪ ಹದಿಮೂರ ಅವರನ್ನು ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ  ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡಿಸಿ ನಂತರ ಬಸ್‌ ನಿಲ್ದಾಣದ ಆವರಣದಲ್ಲಿ ಆಮರಣ ಉಪವಾಸ ಆರಂಭಿಸಲಾಯಿತು.
ರೈತ ಸಂಘದ ಮುಖಂಡ ಅರವಿಂದ ಕುಲಕರ್ಣಿ, ನಿವೃತ್ತ ಶಿಕ್ಷಕ ಸಂಗೊಂಡಪ್ಪ ನಡಕಟ್ಟಿ ಮಾತನಾಡಿ,   ಗ್ರಾಮದ ರೇಣುಕಾಚಾರ್ಯ ವಿದ್ಯಾವರ್ಧಕ ಸಂಸ್ಥೆಯಲ್ಲಿ ಮಹೇಶ ಅನುಕಂಪ ಆಧಾರದ ಮೇಲೆ ನೇಮಕಾತಿಗೆ ಆಗ್ರಹಿಸಿ ಕಳೆದ ವರ್ಷ ಜೂನ್ 13 ರಿಂದ ಜುಲೈ 16 ರವರೆಗೆ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳಲಾಗಿತ್ತು ಎಂದರು.

ಧರಣಿಯಲ್ಲಿ ಮಾದೇವಪ್ಪ ಡಿಗ್ಗಾವಿ, ಮಲ್ಲಪ್ಪ ತಕ್ಕೋಡ, ಪ್ರಕಾಶ ಬಾಗೇವಾಡಿ, ಶ್ರೀಶೈಲ ಬಾಗೇವಾಡಿ, ಗುರಸಿದ್ದ ಕಡಗೋಲ, ಮಲ್ಲಪ್ಪ ಮಾದರ, ಮಲ್ಲಪ್ಪ ಪಟ್ಟಣಶೆಟ್ಟಿ, ಶ್ರೀಶೈಲ ಚಾಂದಕವಟಿ, ಸಿದ್ದಪ್ಪ ಬಾಗೇವಾಡಿ, ಅಪ್ಪು ಪತಂಗಿ, ಶೇಖಪ್ಪ ಬಾಗೇವಾಡಿ, ಸಿದ್ಲಿಂಗಪ್ಪ ಬಾಗೇವಾಡಿ, ಭದ್ರಪ್ಪ ಹದಿಮೂರ, ಚಂದ್ರಶೇಖರ ಅವಟಿ, ಗಂಗಾಬಾಯಿ ಚಾಂದಕವಟೆ, ಬೋರವ್ವ ಬಾಗೇವಾಡಿ, ಚಂದ್ರವ್ವ ಬಾಗೇವಾಡಿ, ಸಂಗಮ್ಮ ಅವಟಿ, ಮಾದೇವಿ ತೋಟದ, ಸಿದ್ದಮ್ಮ ಹದಿಮೂರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT