ಮೀಸಲಾತಿ 10 ವರ್ಷ ಮಾತ್ರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ ಎಂದು ಆರ್ಎಸ್ಎಸ್ ಪ್ರಮುಖರಾದ ಮೋಹನ್ ಭಾಗವತ್ ಮತ್ತು ಅವರ ಶಿಷ್ಯ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದರು. ಮನಮೋಹನ್ ವೈದ್ಯ ಕೂಡಾ ಈಗ ಹೇಳಿದ್ದಾರೆ. ಸಂವಿಧಾನ ಜಾರಿಯಾದ 10 ವರ್ಷದಲ್ಲಿ ತಾರತಮ್ಯ ಅಳಿದುಹೋಗಿದ್ದರೆ, ಸಮಾಜದ ಕೆಳವರ್ಗಕ್ಕೆ ಉದ್ಯೋಗಗಳು ದೊರಕಿದ್ದರೆ ಮೀಸಲಾತಿ ಕೈ ಬಿಡಬಹುದಿತ್ತು. ಮೀಸಲಾತಿ ಬಗ್ಗೆ ಮಾತನಾಡುವವರು ಸಂವಿಧಾನದ ಆಶಯದಂತೆ ಸಮಬಾಳು–ಸಮಪಾಲು ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ತಿವಿದರು.