ಶಾಸಕರು ಬಿಡಿಒ ಕಚೇರಿಗೆ ಗುರುವಾರ ಹಠಾತ್ ಭೇಟಿ ನೀಡಿದ್ದರು. ಆ ಸಂದರ್ಭ ರಸ್ತೆಯಲ್ಲಿ ನಿಲ್ಲಿಸಿದ್ದ ಅವರ ಕಾರಿನಿಂದ ಸಂಚಾರಕ್ಕೆ ತೊಡಕಾಗಿ ರುವುದನ್ನು ಗಮನಿಸಿದ ಜಯಂತ ದಾಸ್ ಅವರು ಅದನ್ನು ತೆರವು ಮಾಡಿಸಿದ್ದರು. ಇದರಿಂದ ಕೋಪಗೊಂಡ ಬೆಂಬಲಿಗರು ಶಾಸಕರಿಗೆ ಮಾಹಿತಿ ನೀಡಿದ್ದರು. ನಂತರ ಜಯಂತ ದಾಸ್ ಅವರು ಶಾಸಕರ ಕಾಲು ಹಿಡಿದು ಕ್ಷಮೆ ಕೋರಿದ್ದರು.