ನವದೆಹಲಿ (ಪಿಟಿಐ): ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗೋವಾ ಚುನಾವಣಾ ರ್್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಚುನಾವಣಾ ಆಯೋಗವು, ನೀತಿ ಸಂಹಿತೆಯನ್ನು ಇದೇ ರೀತಿ ಮತ್ತೆ ಉಲ್ಲಂಘಿಸಿದರೆ ಎಎಪಿಗೆ ನೀಡಿರುವ ಮಾನ್ಯತೆಯನ್ನು ಅಮಾನತು ಮಾಡಲಾ ಗುತ್ತದೆ ಅಥವಾ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.