ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯುತ್ತಿರುವ ಸಭಾಂಗಣದ ಮುಂದೆ ಅಳವಡಿಸಿರುವ ಎಲ್ಇಡಿ ಪರದೆಯಲ್ಲಿ ‘ಅಲ್ಲಮ’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ಕೆಲವರು ಪ್ರತಿಭಟನೆ ನಡೆಸಿದರು.
ಟಿ.ಎಸ್. ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಪ್ರದರ್ಶನ ಶನಿವಾರ ಸಂಜೆ ಸಾಹಿತ್ಯ ಸಂಭ್ರಮದಲ್ಲಿ ನಡೆಯಿತು. ಸಭಾಂಗಣದ ಒಳಗೆ ಮಾತ್ರ ಚಿತ್ರ ಪ್ರದರ್ಶನ ಇತ್ತು. ಸಭಾಂಗಣದ ಒಳಗೆ ನಡೆಯುವ ಎಲ್ಲ ಕಾರ್ಯಕ್ರಮಗಳು ಹೊರಗೆ ಇರುವ ಪರದೆಯಲ್ಲಿ ಅವಕಾಶ ಇತ್ತಾದರೂ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಪರದೆ ಮುಂದೆ ಕಾರ್ಯಕ್ರಮ ವೀಕ್ಷಿಸುತ್ತಾ ಕುಳಿತವರು ಇದರಿಂದ ಅಸಮಾಧಾನಗೊಂಡು ಸಭಾಂಗಣದ ಗೇಟ್ ಬಳಿ ಬಂದು ಪ್ರತಿಭಟಿಸಿದರು.