ಬೆಂಗಳೂರು: ‘ರೈಲ್ವೆ ಸ್ಟೇಷನ್ ಮಾಸ್ಟರ್ಗಳ ಕೆಲಸದಲ್ಲಿ ಕೊಂಚ ಲೋಪವಾದರೂ ಅದು ಭಾರಿ ಅನಾಹುತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸ್ಟೇಷನ್ ಮಾಸ್ಟರ್ಗಳು ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್ ಗೊಹೆನ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಅಖಿಲ ಭಾರತ ಸ್ಟೇಷನ್ ಮಾಸ್ಟರ್ಗಳ ಸಂಘ (ಎಐಎಸ್ಎಂಎ) ಶನಿವಾರ ಆಯೋಜಿಸಿದ್ದ ದಕ್ಷಿಣ ರೈಲ್ವೆ ಸುರಕ್ಷತಾ ಸಮ್ಮೇಳನದಲ್ಲಿ ಮಾತನಾಡಿದರು.
‘ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಷನ್ ಮಾಸ್ಟರ್ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ’ ಎಂದರು.
ಶಾಸಕ ಎಸ್. ಸುರೇಶ್ಕುಮಾರ್ ಮಾತನಾಡಿ, ‘ಸ್ಟೇಷನ್ ಮಾಸ್ಟರ್ಗಳ ಆರೋಗ್ಯದ ದೃಷ್ಟಿಯಿಂದ ಒಂದು ನಿಲ್ದಾಣಕ್ಕೆ ಇಬ್ಬರು ಸ್ಟೇಷನ್ ಮಾಸ್ಟರ್ಗಳನ್ನು ನೇಮಕ ಮಾಡುವ ದಿಸೆಯಲ್ಲಿ ಸರ್ಕಾರ ಮುಂದಾಗಬೇಕು’ ಎಂದರು.
ಸಚಿವರಿಗೆ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಗುಪ್ತಾ, ಸಂಘದ ಅಧ್ಯಕ್ಷ ಆರ್.ಕೆ. ಉನ್ನಿಕೃಷ್ಣನ್, ಪ್ರಧಾನ ಕಾರ್ಯದರ್ಶಿ ಸಿ.ಧನಂಜಯ ಇದ್ದರು.
*
ಪ್ರಮುಖ ಮನವಿಗಳು
* ರೈಲ್ವೆ ಸುಧಾರಣೆಗೆ ಡಾ. ಕುಂಜ್ರು ಸಮಿತಿ ನೀಡಿರುವ ವರದಿಯ ಶಿಫಾರಸು ಅನುಷ್ಠಾನಗೊಳಿಸಬೇಕು.