ಕೇಂದ್ರ ಪರಿಸರ ಸಚಿವಾಲಯ ಈ ನಿಯಮ ಸಿದ್ಧಪಡಿಸಿದೆ. ಜಾನುವಾರು ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಒಳಪಡಿಸುವುದು, ಅಲ್ಲಿನ ಸ್ಥಿತಿ ಸುಧಾರಿಸುವುದು ಇದರ ಉದ್ದೇಶ. ಜಾನುವಾರು ಮಾರಾಟ ಮಾಡುವ ವ್ಯಕ್ತಿ ಅಧಿಕಾರಿಗಳ ಎದುರು, ‘ನಾನು ಇದನ್ನು ಕೊಲ್ಲುವ ಉದ್ದೇಶದಿಂದ ಮಾರುತ್ತಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎನ್ನುತ್ತದೆ ಕರಡು ನಿಯಮ.