ರಾಘವೇಂದ್ರ ಹೆಗಡೆ ಅವರ ಮರಳು ಚಿತ್ರ ಹಾಗೂ ಚಂದನ್ ಶೆಟ್ಟಿ ಅವರ ಕನ್ನಡ ರ್್ಯಾಪ್ ಗೀತೆಗಳು ಉತ್ಸವಕ್ಕೆ ಮೆರುಗು ತಂದವು.
ಉತ್ಸವದ ಕೊನೆಯ ದಿನವಾದ ಭಾನುವಾರ ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಕರಾವಳಿಯ ಅಂತರರಾಷ್ಟ್ರೀಯ ಕಲಾವಿದರ ನೃತ್ಯೋತ್ಸವ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರ ಗಾಯನ ಮನಸೊರೆಗೊಂಡಿತು. ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಬಾಲನಟರಾದ ಅಚಿಂತ್ಯ, ಮಹೇಂದ್ರ, ತುಷಾರ್ ಹಾಗೂ ಸೂರಜ್ ಅವರ ಕಿರುನಾಟಕ ಪ್ರೇಕ್ಷಕರ ಮನರಂಜಿಸಿತು.