ಚೆನ್ನೈ: ಜಲ್ಲುಕಟ್ಟು ಬೆಂಬಲಿಸಿ ಹಿಂಸಾರೂಪದ ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಶಾಂತಿ ಕಾಪಾಡಬೇಕು. ಪ್ರತಿಭಟನೆಯನ್ನು ಕೈಬಿಟ್ಟು ಮನೆಗಳಿಗೆ ತೆರಳಬೇಕು ಎಂದು ಚಿತ್ರನಟರಾದ ಕಮಲಹಾಸನ್ ಹಾಗೂ ಬಾಲಾಜಿ ಅವರು ಸೋಮವಾರ ಮನವಿ ಮಾಡಿದ್ದಾರೆ.
ಜಲ್ಲಿಕಟ್ಟು ನಡೆಸಲು ವಿಶೇಷ ಕಾನೂನು ರೂಪಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಇಂದು ಹಿಂಸಾರೂಪ ಪಡೆದು ಪೊಲೀಸ್ಠಾಣೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ನಟರು ಯುವ ಸಮೂಹಕ್ಕೆ ಕರೆಕೊಟ್ಟಿದ್ದಾರೆ.
ಪೊಲೀಸ್ ಕ್ರಮ ತಪ್ಪು. ಹಿಂಸಾರೂಪದಿಂದ ಯಾವುದೇ ಉತ್ತಮ ಫಲಿತಾಂಶ ಹೊರಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಹಿಂಸಾಚಾರಕ್ಕಿಳಿಯದೆ ಶಾಂತಿ ಕಾಪಾಡಬೇಕು ಎಂದು ಕಮಲಹಾಸನ್ ಟ್ವೀಟ್ ಮಾಡಿದ್ದಾರೆ.
This is a mistake. Aggressive police action on students passive resistance will not bear good results.