ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರ ನಿಲ್ಲಿಸಿ ಮನೆಗೆ ತೆರಳಿ: ಯುವ ಸಮೂಹಕ್ಕೆ ನಟ ಕಮಲಹಾಸನ್‌, ಬಾಲಾಜಿ ಕರೆ

Last Updated 23 ಜನವರಿ 2017, 10:28 IST
ಅಕ್ಷರ ಗಾತ್ರ

ಚೆನ್ನೈ: ಜಲ್ಲುಕಟ್ಟು ಬೆಂಬಲಿಸಿ ಹಿಂಸಾರೂಪದ ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಶಾಂತಿ ಕಾಪಾಡಬೇಕು. ಪ್ರತಿಭಟನೆಯನ್ನು ಕೈಬಿಟ್ಟು ಮನೆಗಳಿಗೆ ತೆರಳಬೇಕು ಎಂದು ಚಿತ್ರನಟರಾದ ಕಮಲಹಾಸನ್‌ ಹಾಗೂ ಬಾಲಾಜಿ ಅವರು ಸೋಮವಾರ ಮನವಿ ಮಾಡಿದ್ದಾರೆ.

ಜಲ್ಲಿಕಟ್ಟು ನಡೆಸಲು ವಿಶೇಷ ಕಾನೂನು ರೂಪಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಇಂದು ಹಿಂಸಾರೂಪ ಪಡೆದು ಪೊಲೀಸ್‌ಠಾಣೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ನಟರು ಯುವ ಸಮೂಹಕ್ಕೆ ಕರೆಕೊಟ್ಟಿದ್ದಾರೆ.

ಪೊಲೀಸ್‌ ಕ್ರಮ ತಪ್ಪು. ಹಿಂಸಾರೂಪದಿಂದ ಯಾವುದೇ ಉತ್ತಮ ಫಲಿತಾಂಶ ಹೊರಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಹಿಂಸಾಚಾರಕ್ಕಿಳಿಯದೆ ಶಾಂತಿ ಕಾಪಾಡಬೇಕು ಎಂದು ಕಮಲಹಾಸನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT