<p>ಬೆಟ್ಟದೂರಲಿ ನಡೆಯುತ್ತಿತ್ತು<br /> ಬೆಟ್ಟದವ್ವನ ಜಾತ್ರೆಯು<br /> ಕಾಡಿನ ಪ್ರಾಣಿಗಳೆಲ್ಲವು ಸೇರಿ<br /> ಹೊರಟವು ಜಾತ್ರೆಯ ನೋಡಲು</p>.<p>ಜೇನನು ಮಾರಿ ಕೂಡಿದ ಹಣವನು<br /> ಹೊತ್ತು ಕರಡಿಯು ಹೊರಟಿತ್ತು<br /> ನೇರಳೆ ಹಣ್ಣಲಿ ಗಳಿಸಿದ ರೊಕ್ಕವ<br /> ಎಣಿಸುತ ಮಂಗವು ನಡೆದಿತ್ತು</p>.<p>ತಾತನ ಗಂಟನು ಪಡೆದಾ ಒಂಟೆ<br /> ಮೆಲ್ಲನೆ ಹೆಜ್ಜೆಯು ಹಾಕಿತ್ತು<br /> ಕಳ್ಳ ಬುದ್ಧಿಯ ಗುಳ್ಳೆ ನರಿಯದು<br /> ಸಂಚನು ಹೆಣೆಯುತ ಸಾಗಿತ್ತು</p>.<p>ಕಬ್ಬನು ಕೊಟ್ಟು ಕಾಸನು ಹೊಂದಿದ<br /> ಆನೆಯು ಎಲ್ಲಕು ಮುಂದಿತ್ತು<br /> ಹುಲ್ಲನು ಸಾಗಿಸಿ ನೋಟನು ಎಣಿಸಿದ<br /> ಜಿಂಕೆಯು ಟಣ್ಣನೆ ಜಿಗಿದಿತ್ತು</p>.<p>ಗರ್ಜನೆಗೈದು ಚಂದಾ ಎತ್ತಿ<br /> ಸಿಂಹವು ಗುಂಪಲಿ ಸೇರಿತ್ತು<br /> ಗುಹೆಯಲಿ ದೊರೆತ ನಿಧಿಯನು ಹಿಡಿದು<br /> ಹುಲಿಯದು ಗತ್ತಲಿ ಕೂಡಿತ್ತು<br /> ಚಿರತೆ ಜಿರಾಫೆ ಘೇಂಡಾ ಜೀಬ್ರಾ<br /> ಓಡುತ ಬಂದು ಸೇರಿದವು<br /> ಮೊಲ ಸಾರಂಗ ಹಾವು ಮುಂಗುಸಿ<br /> ದಾರಿಯ ಮಧ್ಯೆ ಕೂಡಿದವು</p>.<p>ಬೆಟ್ಟದೂರನು ಕಾಡಿನ ಬಳಗವು<br /> ತಲುಪಲು ಸಂತಸ ಪಟ್ಟವು<br /> ಬೆಟ್ಟದವ್ವನ ದರುಶನ ಪಡೆದು<br /> ಜಾತ್ರೆಯ ನೋಡಲು ತೆರಳಿದವು</p>.<p>ಸಂಜೆಯ ಹೊತ್ತಲಿ ಬೆಟ್ಟದವ್ವನ<br /> ತೇರಿನ ಸಡಗರ ಕಂಡವು<br /> ಇರುಳಲಿ ಸರ್ಕಸ್ ನಾಟಕ ನೋಡಿ<br /> ಭರ್ಜರಿ ರಂಜನೆ ಪಡೆದವು</p>.<p>ಬಗೆಬಗೆ ತಿಂಡಿ ವಸ್ತುವಿಗಾಗಿ<br /> ಹಣವನು ಖರ್ಚು ಮಾಡಿದವು<br /> ತಂದಿಹ ಕಾಸು ಆಗಲು ಖಾಲಿ<br /> ಕಾಡಿನ ದಾರಿಯ ಹಿಡಿದವು</p>.<p>ಬೆಟ್ಟದವ್ವನ ದೊಡ್ಡ ಜಾತ್ರೆಯು<br /> ಮೃಗಗಳ ಮನವನು ತಣಿಸಿತ್ತು<br /> ಸಮರಸ ಭಾವವು ಪ್ರಾಣಿಗಳಲ್ಲಿ<br /> ಉಕ್ಕುವ ಹಾಗೆ ಮಾಡಿತ್ತು.</p>.<p><em><strong>–ಸೋಮಲಿಂಗ ಬೇಡರ ಆಳೂರ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೆಟ್ಟದೂರಲಿ ನಡೆಯುತ್ತಿತ್ತು<br /> ಬೆಟ್ಟದವ್ವನ ಜಾತ್ರೆಯು<br /> ಕಾಡಿನ ಪ್ರಾಣಿಗಳೆಲ್ಲವು ಸೇರಿ<br /> ಹೊರಟವು ಜಾತ್ರೆಯ ನೋಡಲು</p>.<p>ಜೇನನು ಮಾರಿ ಕೂಡಿದ ಹಣವನು<br /> ಹೊತ್ತು ಕರಡಿಯು ಹೊರಟಿತ್ತು<br /> ನೇರಳೆ ಹಣ್ಣಲಿ ಗಳಿಸಿದ ರೊಕ್ಕವ<br /> ಎಣಿಸುತ ಮಂಗವು ನಡೆದಿತ್ತು</p>.<p>ತಾತನ ಗಂಟನು ಪಡೆದಾ ಒಂಟೆ<br /> ಮೆಲ್ಲನೆ ಹೆಜ್ಜೆಯು ಹಾಕಿತ್ತು<br /> ಕಳ್ಳ ಬುದ್ಧಿಯ ಗುಳ್ಳೆ ನರಿಯದು<br /> ಸಂಚನು ಹೆಣೆಯುತ ಸಾಗಿತ್ತು</p>.<p>ಕಬ್ಬನು ಕೊಟ್ಟು ಕಾಸನು ಹೊಂದಿದ<br /> ಆನೆಯು ಎಲ್ಲಕು ಮುಂದಿತ್ತು<br /> ಹುಲ್ಲನು ಸಾಗಿಸಿ ನೋಟನು ಎಣಿಸಿದ<br /> ಜಿಂಕೆಯು ಟಣ್ಣನೆ ಜಿಗಿದಿತ್ತು</p>.<p>ಗರ್ಜನೆಗೈದು ಚಂದಾ ಎತ್ತಿ<br /> ಸಿಂಹವು ಗುಂಪಲಿ ಸೇರಿತ್ತು<br /> ಗುಹೆಯಲಿ ದೊರೆತ ನಿಧಿಯನು ಹಿಡಿದು<br /> ಹುಲಿಯದು ಗತ್ತಲಿ ಕೂಡಿತ್ತು<br /> ಚಿರತೆ ಜಿರಾಫೆ ಘೇಂಡಾ ಜೀಬ್ರಾ<br /> ಓಡುತ ಬಂದು ಸೇರಿದವು<br /> ಮೊಲ ಸಾರಂಗ ಹಾವು ಮುಂಗುಸಿ<br /> ದಾರಿಯ ಮಧ್ಯೆ ಕೂಡಿದವು</p>.<p>ಬೆಟ್ಟದೂರನು ಕಾಡಿನ ಬಳಗವು<br /> ತಲುಪಲು ಸಂತಸ ಪಟ್ಟವು<br /> ಬೆಟ್ಟದವ್ವನ ದರುಶನ ಪಡೆದು<br /> ಜಾತ್ರೆಯ ನೋಡಲು ತೆರಳಿದವು</p>.<p>ಸಂಜೆಯ ಹೊತ್ತಲಿ ಬೆಟ್ಟದವ್ವನ<br /> ತೇರಿನ ಸಡಗರ ಕಂಡವು<br /> ಇರುಳಲಿ ಸರ್ಕಸ್ ನಾಟಕ ನೋಡಿ<br /> ಭರ್ಜರಿ ರಂಜನೆ ಪಡೆದವು</p>.<p>ಬಗೆಬಗೆ ತಿಂಡಿ ವಸ್ತುವಿಗಾಗಿ<br /> ಹಣವನು ಖರ್ಚು ಮಾಡಿದವು<br /> ತಂದಿಹ ಕಾಸು ಆಗಲು ಖಾಲಿ<br /> ಕಾಡಿನ ದಾರಿಯ ಹಿಡಿದವು</p>.<p>ಬೆಟ್ಟದವ್ವನ ದೊಡ್ಡ ಜಾತ್ರೆಯು<br /> ಮೃಗಗಳ ಮನವನು ತಣಿಸಿತ್ತು<br /> ಸಮರಸ ಭಾವವು ಪ್ರಾಣಿಗಳಲ್ಲಿ<br /> ಉಕ್ಕುವ ಹಾಗೆ ಮಾಡಿತ್ತು.</p>.<p><em><strong>–ಸೋಮಲಿಂಗ ಬೇಡರ ಆಳೂರ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>