ಗೋಹತ್ಯೆ ನಿಷೇಧ ಪ್ರಶ್ನೆ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ನೇಮಕ
ನವದೆಹಲಿ, ಜ. 31– ಗೋ ಹತ್ಯೆಯನ್ನು ನಿಷೇಧಿಸಬೇಕೆಂಬ ಪ್ರಶ್ನೆಯನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಕ ಮಾಡುವುದೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.
ಪುರಿ ಗೋವರ್ಧನ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಮತ್ತು ಪ್ರಭುದತ್ತ ಬ್ರಹ್ಮಚಾರಿ ಅವರು ಉಪವಾಸ ನಿಲ್ಲಿಸಿರುವುದು, ಈ ಸಮಸ್ಯೆಯನ್ನು ಸಮಿತಿಯು ಶಾಂತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸುವುದಕ್ಕೆ ಮಾರ್ಗ ಮಾಡುತ್ತದೆಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.