ಗಿರಿಧರ್ ದಿವಾನ್ ಸಂಗೀತ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್, ಜಗ್ಗೇಶ್, ರಾಮ್ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಟಿಪ್ಪು ನಾರಾಯಣನ್, ಕಾರ್ತಿಕ್, ಅನುರಾಧಾ ಭಟ್, ಪುನೀತ್ ರಾಜಕುಮಾರ್, ಆಸ್ಕರ್, ನಕುಲ್ ಭಯಂಕರ್, ಸುನೀತಾ ಹಾಡಿದ್ದಾರೆ. ಚಿಪ್ಸ್ ಮಾಡಿ ಅಂಗಡಿಗಳಿಗೆ ಮಾರುವ ಉದ್ಯಮಿ ಆರ್. ಕೃಷ್ಣ ಚಿತ್ರದ ನಿರ್ಮಾಪಕ. ಜಗ್ಗೇಶ್ ಮೇಲಿನ ಅಭಿಮಾನಕ್ಕೆ ಅವರು ಸಿನಿಮಾ ನಿರ್ಮಿಸಿದ್ದಾರೆ.