‘ಜೀ’ ಕನ್ನಡ ಮನರಂಜನಾ ವಾಹಿನಿ ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ವಾರಸ್ದಾರ’ ಎಂಬ ನೂತನ ಧಾರಾವಾಹಿಯನ್ನು ಆರಂಭಿಸಿತ್ತು.
ಒಂದು ತಿಂಗಳ ಅವಧಿಯಲ್ಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಕ ಬಳಗವನ್ನು ಸಂಪಾದಿಸಿದ ಈ ಧಾರಾವಾಹಿಯಲ್ಲಿ ಇದೀಗ ಮಹತ್ತರ ಪಾತ್ರವೊಂದರ ಪ್ರವೇಶವಾಗುತ್ತಿದೆ. ಅದು ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ. ಶಿವಪುರ ಎಂಬ ಪುಟ್ಟಗ್ರಾಮದಲ್ಲಿ ನಡೆದಂಥ ಕಥೆ ಇದಾಗಿದ್ದು ಅಲ್ಲಿನ ಎರಡು ಮನೆತನಗಳ ಕಥೆಯನ್ನು ಈ ಧಾರಾವಾಹಿ ಹೇಳಲಿದೆ. ಸಿಂಹವಂಶದ ಕುಟುಂಬದಲ್ಲಿ ನಡೆಯುವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಧಾರಾವಾಹಿಯನ್ನು ರೂಪಿಸಲಾಗಿದೆ. ಸಿಂಹವಂಶದ ಸೊಸೆಯಾದ ಭವಾನಿ ತಾನು ಹೆತ್ತ ಹೆಣ್ಣುಮಗುವನ್ನು ಉಳಿಸಿಕೊಳ್ಳಲು ಹೋರಾಡುವುದೇ ವಾರಸ್ದಾರ ಕಥೆಯ ಮುಖ್ಯ ತಿರುಳಾಗಿದೆ.
ಭವಾನಿಯ ಪಾತ್ರದಲ್ಲಿ ನಟಿ ಯಜ್ಞಾಶೆಟ್ಟಿ ನಟಿಸಿದ್ದಾರೆ. ಸೋಮವಾರದಿಂದ ಶುಕ್ರವಾರ ದವರೆಗೆ ಪ್ರತಿದಿನ ರಾತ್ರಿ 7.30ರಿಂದ ಜೀ ಕನ್ನಡ ವಾಹಿನಿಯಲ್ಲಿ ವಾರಸ್ದಾರ ಪ್ರಸಾರವಾಗುತ್ತಿದೆ.