ಮೈಸೂರು: ಪಕ್ಷ ಸಂಘಟನೆಗೆ ಒತ್ತು ನೀಡಿ, ಒಗ್ಗಟ್ಟಿನಿಂದ ಚುನಾವಣೆ ಎದುರಿ ಸಬೇಕು ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಗರದ ಹೊರವಲಯದ ಹೂಟ ಗಳ್ಳಿಯ ಲಕ್ಷ್ಮಿದೇವಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿ ಸಿದ್ದ ಜಿಲ್ಲಾ ಬಿಜೆಪಿ ಗ್ರಾಮಾಂತರ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
‘ನಂಜನಗೂಡು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಿರ್ಧಾರವಾಗಿದೆ. ಕಾಂಗ್ರೆಸ್ನಿಂದ ಕೇಶವಮೂರ್ತಿ, ಬೋಸ್ ಯಾರೂ ಕಣಕ್ಕಿಳಿದರೂ ಚಿಂತೆ ಇಲ್ಲ. ಆ ಪಕ್ಷದಲ್ಲಿ ದಿನಕ್ಕೊಬ್ಬ ಅಭ್ಯರ್ಥಿ ಹೆಸರು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಆ ಗೊಂದಲ ಇಲ್ಲ’ ಎಂದು ಹೇಳಿದರು.
‘ನಂಜನಗೂಡು ಉಪಚುನಾವಣೆ ಬಳಿಕ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳು ತ್ತೇನೆ. ಬಿಜೆಪಿ ಬಲಪಡಿಸಲು ಶ್ರಮಿಸು ತ್ತೇನೆ. ಕಾರ್ಯಕರ್ತರು ಒಗ್ಗೂಡಿ ಪಕ್ಷ ಸಂಘಟಿಸಬೇಕು’ ಎಂದರು.
ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಶಿವಣ್ಣ ಮಾತ ನಾಡಿ, ಮುಖಂಡರು, ಕಾರ್ಯಕರ್ತರು ಸಣ್ಣ– ಪುಟ್ಟ ಭಿನ್ನಾಭಿಪ್ರಾಯ ಮನಸ್ಸಿನಲ್ಲಿಟ್ಟು ಕೊಳ್ಳಬಾರದು. ಚುನಾವಣೆ ಗಮನದ ಲ್ಲಿಟ್ಟುಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿ.ಪಂ ಉಪಾಧ್ಯಕ್ಷ ನಟರಾಜ್, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಅರುಣ್ಕುಮಾರ್, ಮುಖಂಡರಾದ ಎನ್.ವಿ.ಫಣೀಶ್, ನಾಗರಾಜ ಮಲ್ಲಾಡಿ ಇತರರು ಹಾಜರಿದ್ದರು.