ಇದರಿಂದಾಗಿ ಹಳ್ಳಿಗಳ ರಸ್ತೆ, ಕೆರೆ, ಶೌಚಾಲಯ, ಬದುವು ನಿರ್ಮಾಣ, ಸಸಿ ಬೆಳೆಸುವಿಕೆ, ಆಟದ ಮೈದಾನ, ಉದ್ಯಾನ, ಸಮುದಾಯ ಭವನ, ಒಕ್ಕಲುತನದ ಕಣ ನಿರ್ಮಾಣದಂತಹ ಒಟ್ಟು 21 ಅಂಶಗಳ ಕಾರ್ಯಕ್ರಮಗಳನ್ನು ಸರ್ಕಾರವು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಯೋಜನೆಯ ಲಾಭ ಗ್ರಾಮೀಣ ಜನರಿಗೆ ತಲುಪದೇ ಅವರು ಗುಳೇ ಹೋಗುವದು ಇಂದಿಗೂ ತಪ್ಪಿಲ್ಲ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗ್ರಾಮೀಣರು ಮುಂದಾಗಬೇಕು. ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡಿ ದಿನಕ್ಕೆ ₹ 224 ಕೂಲಿ ಪಡೆಯಬಹುದು. ಕಾರಣ ಗ್ರಾಮೀಣರು ಸಂಘಟನೆಯ ಮೂಲಕ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದು 10 ವರ್ಷ ಕಳೆದರೂ ಕೃಷಿಕೂಲಿಕಾರರಿಗೆ ಉದ್ಯೋಗ ಮಾಹಿತಿ ನೀಡುವಲ್ಲಿ ಹಾಗೂ ಕೆಲಸ ನಿರ್ವಹಿಸುವಲ್ಲಿ ಗ್ರಾಮ ಪಂಚಾಯ್ತಿಗಳು ಸಂಪೂರ್ಣ ವಿಫಲವಾಗಿವೆ.