ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೇಲುಕೋಟೆ ಮಂಜ
ಜಗ್ಗೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ ನಟಿಸಿರುವ ಚಿತ್ರವಿದು. ಆರ್. ಕೃಷ್ಣ ನಿರ್ಮಾಣದ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ಮತ್ತು ದಾಸರಿ ಸೀನು ಛಾಯಾಗ್ರಹಣವಿದೆ. ಐಂದ್ರಿತಾ ರೇ, ರಂಗಾಯಣ ರಘು ಮುಂತಾದವರು ತಾರಾಗಣದಲ್ಲಿದ್ದಾರೆ.

ಅಮರಾವತಿ
ಬಿ.ಎಂ. ಗಿರಿರಾಜ್ ಈ ಚಿತ್ರದ ನಿರ್ದೇಶಕ. ಅಚ್ಯುತ್ ಕುಮಾರ್ ಮುಖ್ಯಪಾತ್ರದಲ್ಲಿರುವ ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಜೋಯುಲ್ ಡುಬ್ಬ ಮತ್ತು ಅಭಿಲಾಷ್ ಲಾಖ್ರ ಸಂಗೀತ ನಿರ್ದೇಶನ ಹಾಗೂ ಅರ್ಜುನ್ ಸಂಕಲನವಿದೆ.

ಸ್ಮೈಲ್ ಪ್ಲೀಸ್
ಕೆ. ಮಂಜು ನಿರ್ಮಾಣದ ಈ ಚಿತ್ರಕ್ಕೆ ರಘು ಸಮರ್ಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ ಗುರುನಂದನ್, ಕಾವ್ಯಾ ಶೆಟ್ಟಿ, ನೇಹಾ ಪಾಟೀಲ್ ಮುಂತಾದವರು ಚಿತ್ರದಲ್ಲಿದ್ದಾರೆ.

ಏನೆಂದು ಹೆಸರಿಡಲಿ
ರವಿ ಬಸಪ್ಪನದೊಡ್ಡಿ ಚೊಚ್ಚಿಲ ನಿರ್ದೇಶನದ ಚಿತ್ರವಿದು. ಅರ್ಜುನ್ ಮತ್ತು ರೋಜಾ ನಾಯಕ– ನಾಯಕಿ. ಶ್ರೀನಿವಾಸ ಕುಲಕರ್ಣಿ ಮತ್ತು ಶ್ರುತಿ ಕುಲಕರ್ಣಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುರೇಂದ್ರನಾಥ್‌ ಬಿ.ಆರ್‌. ಸಂಗೀತ ನಿರ್ದೇಶನ ಹಾಗೂ ಮಂಜುನಾಥ್‌ ನಾಯಕ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT