ಮೇಲುಕೋಟೆ ಮಂಜ
ಜಗ್ಗೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ ನಟಿಸಿರುವ ಚಿತ್ರವಿದು. ಆರ್. ಕೃಷ್ಣ ನಿರ್ಮಾಣದ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ಮತ್ತು ದಾಸರಿ ಸೀನು ಛಾಯಾಗ್ರಹಣವಿದೆ. ಐಂದ್ರಿತಾ ರೇ, ರಂಗಾಯಣ ರಘು ಮುಂತಾದವರು ತಾರಾಗಣದಲ್ಲಿದ್ದಾರೆ.
ಅಮರಾವತಿ
ಬಿ.ಎಂ. ಗಿರಿರಾಜ್ ಈ ಚಿತ್ರದ ನಿರ್ದೇಶಕ. ಅಚ್ಯುತ್ ಕುಮಾರ್ ಮುಖ್ಯಪಾತ್ರದಲ್ಲಿರುವ ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ಜೋಯುಲ್ ಡುಬ್ಬ ಮತ್ತು ಅಭಿಲಾಷ್ ಲಾಖ್ರ ಸಂಗೀತ ನಿರ್ದೇಶನ ಹಾಗೂ ಅರ್ಜುನ್ ಸಂಕಲನವಿದೆ.
ಸ್ಮೈಲ್ ಪ್ಲೀಸ್
ಕೆ. ಮಂಜು ನಿರ್ಮಾಣದ ಈ ಚಿತ್ರಕ್ಕೆ ರಘು ಸಮರ್ಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ ಗುರುನಂದನ್, ಕಾವ್ಯಾ ಶೆಟ್ಟಿ, ನೇಹಾ ಪಾಟೀಲ್ ಮುಂತಾದವರು ಚಿತ್ರದಲ್ಲಿದ್ದಾರೆ.
ಏನೆಂದು ಹೆಸರಿಡಲಿ
ರವಿ ಬಸಪ್ಪನದೊಡ್ಡಿ ಚೊಚ್ಚಿಲ ನಿರ್ದೇಶನದ ಚಿತ್ರವಿದು. ಅರ್ಜುನ್ ಮತ್ತು ರೋಜಾ ನಾಯಕ– ನಾಯಕಿ. ಶ್ರೀನಿವಾಸ ಕುಲಕರ್ಣಿ ಮತ್ತು ಶ್ರುತಿ ಕುಲಕರ್ಣಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುರೇಂದ್ರನಾಥ್ ಬಿ.ಆರ್. ಸಂಗೀತ ನಿರ್ದೇಶನ ಹಾಗೂ ಮಂಜುನಾಥ್ ನಾಯಕ ಛಾಯಾಗ್ರಹಣವಿದೆ.