ಹಿರಿತೆರೆ ಕಿರುತೆರೆಯೆನ್ನದೆ ಇತ್ತೀಚೆಗೆ ಎಲ್ಲರೂ ದೇವರು, ದೆವ್ವಗಳ ಹಿಂದೆ ಬಿದ್ದಿದ್ದಾರೆ. ಇವುಗಳ ಅತಿಯಾದ ವೈಭವೀಕರಣದಿಂದ ವೀಕ್ಷಕರಲ್ಲಿ ಮೂಢ ನಂಬಿಕೆಯನ್ನು ಬಿತ್ತುತ್ತಿದ್ದಾರೆ. ಕಿರುತೆರೆಯಲ್ಲಿ ದೆವ್ವದ ಕುರಿತು ಬರುತ್ತಿರುವ ಧಾರಾವಾಹಿಗಳಲ್ಲಿ ಚಿಕ್ಕ ಮಕ್ಕಳನ್ನೂ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಧಾರಾವಾಹಿಗಳನ್ನು ನೋಡುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ.
ಇವುಗಳನ್ನು ತೆಗೆಯುವ ನಿರ್ದೇಶಕರು, ನಿರ್ಮಾಪಕರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ಇನ್ನಾದರೂ ಅವರು ತಮ್ಮ ಅಭಿರುಚಿಯನ್ನು ಬದಲಾಯಿಸಿಕೊಂಡು, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹವುಗಳನ್ನು ಚಿತ್ರಿಸಲಿ.
-ಗಣೇಶ ಆರ್., ಮಂಗಳೂರು