ಆದರೆ ಅದಕ್ಕಿಂತ ಒಂದು ದಿನ ಮುಂಚೆ (ಸೋಮವಾರ) ನಮ್ಮ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ ಪಕ್ಷದ ವತಿಯಿಂದ ಲೋಕಸಭೆಯಲ್ಲಿ ಅದ್ಭುತ ಭಾಷಣ ಮಾಡಿ ಸರ್ಕಾರದ ಸುಳ್ಳು-ಮೋಸಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಅದರ ಬಗ್ಗೆ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳಲ್ಲಿ ಚಕಾರವೇ ಇಲ್ಲ. ಕೊನೇಪಕ್ಷ ಅವರ ಭಾಷಣದ ಸಾರವನ್ನಾದರೂ ಪ್ರಕಟಿಸುವ, ಪ್ರಸಾರ ಮಾಡುವ ಸೌಜನ್ಯ ರಾಷ್ಟ್ರೀಯ ಮಾಧ್ಯಮಗಳು ತೋರಲಿಲ್ಲ.
ಖರ್ಗೆಯವರು ದಕ್ಷಿಣ ಭಾರತೀಯರಾದರೂ ಅವರಿಗೆ ಹಿಂದಿ ಮತ್ತು ಉರ್ದು ಭಾಷೆಗಳ ಮೇಲೆ ಹಿಡಿತ ಇದೆ. ಆದರೂ ರಾಷ್ಟ್ರೀಯ ಮಾಧ್ಯಮಗಳು ಅವರ ಭಾಷಣ ಕಡೆಗಣಿಸಿವೆ. ಇದಕ್ಕೆ ಅವರು ದಲಿತರೆಂಬುದು ಮುಖ್ಯ ಕಾರಣ ಇರಬಹುದೇ?