ನ್ಯಾಯಾಲಯಗಳ ಸಮಾರಂಭಗಳಲ್ಲಿ ಶಾಸಕರು ಹಾಗೂ ಸಚಿವರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿ ಹೈಕೋರ್ಟ್ ಹೊರಡಿಸಿರುವ ಸುತ್ತೋಲೆ ವಿರುದ್ಧ ವಿಧಾನ ಪರಿಷತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸುತ್ತೋಲೆಯು ಶಾಸಕಾಂಗಕ್ಕೆ ಮಾಡಿರುವ ಅವಮಾನ ಎಂದಿದ್ದಾರೆ.
ನ್ಯಾಯಾಲಯಗಳ ಸಮಾರಂಭಗಳಲ್ಲಿ ಶಾಸಕರು ಹಾಗೂ ಸಚಿವರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸುವ ಬದಲಾಗಿ ಶಾಸಕರು ಮತ್ತು ಸಚಿವರು ಭಾಗವಹಿಸುವ ಸಮಾರಂಭಗಳಲ್ಲಿ ನ್ಯಾಯಾಧೀಶರು, ನ್ಯಾಯಮೂರ್ತಿಗಳು ಪಾಲ್ಗೊಳ್ಳುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದ್ದರೆ ಆ ಸುತ್ತೋಲೆ ಅರ್ಥಪೂರ್ಣವಾಗುತ್ತಿತ್ತು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗುವ ವಿವಿಧ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ನ್ಯಾಯಾಧೀಶರು, ನ್ಯಾಯಮೂರ್ತಿಗಳ ಆಸುಪಾಸಿನಲ್ಲಿ ಕುಳಿತುಕೊಳ್ಳುವ ಅತಿಥಿಗಳ ವಿಚಾರವಾಗಿ ನ್ಯಾಯಾಧೀಶರಿಗೇ ಅಸಮಾಧಾನವಿದೆ.
–ಪಿ.ಜೆ.ರಾಘವೇಂದ್ರ, ಮೈಸೂರು