‘ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ವಿಕಾಸಕ್ಕೆ ಮಹಿಳೆಯರ ಸಹಭಾಗಿತ್ವ ಅತ್ಯಂತ ಪ್ರಮುಖ. ಮಹಿಳೆಯರಿಗೆ ಕರಾಟೆ ಕಲಿಸಿದರೆ ಅತ್ಯಾಚಾರ ಪ್ರಕರಣಗಳು ನಿಲ್ಲುವುದಿಲ್ಲ. ಮಹಿಳೆಯರು ಮುಕ್ತವಾಗಿ ಓಡಾಡುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರೆಲ್ಲ ಒಗ್ಗಟ್ಟು ಪ್ರದರ್ಶಿಸಿದರೆ ಖಂಡಿತವಾಗಿ ಮದ್ಯ ಮಾರಾಟ ನಿಷೇಧ ಆಗುತ್ತದೆ’ ಎಂದು ಹೇಳಿದರು.
‘ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಶೌಚಾಲಯಗಳಿಲ್ಲ. ಇಂಥ ಸನ್ನಿವೇಶ ದಲ್ಲಿ ಸ್ವಚ್ಛ ಭಾರತ ಅಭಿಯಾನವು ನಾಚಿಕೆಗೀಡು’ ಎಂದ ಅವರು ‘ಏಪ್ರಿಲ್ 12 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಶಾ ಮುಕ್ತ ಭಾರತಕ್ಕಾಗಿ ಸಮಾವೇಶ ಏರ್ಡಿಸಲಾಗಿದೆ’ ಎಂದರು.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಬಿ.ಆರ್. ಪಾಟೀಲ, ಡಾ.ಶಾಂತಾ ಅಷ್ಟಗಿ ಮಾತನಾಡಿದರು. ನಾಗರತ್ನಾ ದೇಶಮಾನ್ಯ, ವಿದ್ಯಾ ಪಾಟೀಲ, ಸುನೀತಾ ಪೂಜಾರಿ, ನಾಗರತ್ನಾ ದೇಶಮಾನ್ಯೆ ಇದ್ದರು.