ಚನ್ನಪಟ್ಟಣ: ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಗೆ ತಳ್ಳಿ ಸಾಯಿಸಿ ನಂತರ ತಾನೂ ತೊಟ್ಟಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ರೇಖಾ (26), ಮಗಳು ಮನ್ವಿತಾ(3) ಹಾಗೂ ಮಗ ನೂತನ್ (7) ಮೃತಪಟ್ಟವರು. ನವೀನ್ ಎಂಬುವರ ಪತ್ನಿಯಾದ ರೇಖಾ ಮೂಲತಃ ಮದ್ದೂರು ತಾಲ್ಲೂಕಿನ ಹನುಮಂತಪುರ ಗ್ರಾಮದವರು.
ನವೀನ್ ಎರಡು ತಿಂಗಳುಗಳಿಂದ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತಮಿಳುನಾಡಿನ ಕೃಷ್ಣಗಿರಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಬದುಕುಳಿಯುವುದಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.