‘ಮಾಂತ್ರಿಕ’ ಇದು ದೆವ್ವ ಭೂತಗಳ ಕಥೆ ಅಲ್ಲ, ದೆವ್ವಗಳೆಲ್ಲ ಇಲ್ಲ ಎನ್ನುವ ರೀತಿಯಲ್ಲಿಯೇ ಸಿನಿಮಾದಲ್ಲಿ ತೋರಿಸಿದ್ದೇವೆ’ ಹೀಗೆ ನಿರೀಕ್ಷಣಾ ಜಾಮೀನು ಪಡೆದುಕೊಂಡೇ ಪತ್ರಕರ್ತರ ಜತೆ ಮಾತಿಗೆ ಇಳಿದರು ನಿರ್ದೇಶಕ ವ್ಯಾನ ವರ್ಣ.
ಆದರೆ ಸುದ್ದಿಗೋಷ್ಠಿಯುದ್ದಕ್ಕೂ ಕಲಾವಿದರೆಲ್ಲ ಹಂಚಿಕೊಂಡಿದ್ದು ಚಿತ್ರೀಕರಣದಲ್ಲಿ ತಾವು ಅನುಭವಿಸಿದ್ದೇವೆ ಎನ್ನಲಾದ ಭೂತದ ಕತೆಗಳನ್ನೇ!
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಸಿನಿಮಾ ಮಾಡುವ ಉದ್ದೇಶದಿಂದಲೇ ತಮ್ಮ ಹೆಸರನ್ನೂ ‘ವ್ಯಾನ ವರ್ಣ’ ಎಂದು ಬದಲಿಸಿಕೊಂಡಿದ್ದಾರೆ.