ಆದರೆ ಅದರಲ್ಲಿ ಒಂದು ಹನಿಯೂ ನೀರು ಬರಲಿಲ್ಲ’ ಎಂದು ಹತಾಶೆಯಿಂದ ನುಡಿಯುತ್ತಾರೆ ಪಂಚಾಕ್ಷರಪ್ಪ.ಗ್ರಾಮದ ತಿಪ್ಪೇಸ್ವಾಮಿ, ಜಯರಾಮಪ್ಪ, ಬಸಪ್ಪ, ಚಂದ್ರಪ್ಪ, ಶ್ರೀಕಾಂತ್, ಚೌಡಪ್ಪ, ನಿಂಗಪ್ಪ ಇನ್ನಿತರ ರೈತರಿಗೆ ಸೇರಿದ್ದ ಸುಮಾರು 45–50 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ತೋಟಗಳು ಭಾಗಶಃ ಒಣಗುತ್ತಿವೆ. ಅಲ್ಲದೆ, ಫೆಬ್ರುವರಿ ತಿಂಗಳ ಅಂತ್ಯಕ್ಕೆ ಅಥವಾ ಮಾರ್ಚ್/ಏಪ್ರಿಲ್ ವೇಳೆಗೆ ಒಣಗುವ ತೋಟಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮದ ರೈತರು.