ಜೇವರ್ಗಿ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶನಿವಾರ ವಿಷ್ಣು ಸಹಸ್ರನಾಮ ಪಾರಾಯಣ ಪಠಣ ಕಾರ್ಯಕ್ರಮ ಜರುಗಿತು. ಕಲಬುರ್ಗಿಯ ಹಂಸನಾಮ ಪಾರಾಯಣ ಸಮಿತಿ, ಲಕ್ಷ್ಮಿ ನಾರಾಯಣ ಪಾರಾಯಣ ಸಮಿತಿ ಸಹಯೋಗದಲ್ಲಿ ಗುರುರಾಯರ ಮಠದಲ್ಲಿ ಪಠಣ ನಡೆಯಿತು.
ತಾಲ್ಲೂಕಿನ ರಾಸಣಗಿಯ ಬಲ ಭೀಮಸೇನ್ ದೇವಸ್ಥಾನ, ನೆಲೋಗಿಯ ಹನುಮಾನ ದೇವಸ್ಥಾನ, ಕಾಸರಭೋಸ ಗಾದ ಹನುಮಾನ ದೇವಸ್ಥಾನ, ದುಮ್ಮ ದ್ರಿಯ ವರಹಳ್ಳೇ ರಾಯ ದೇವಸ್ಥಾನ ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳಲ್ಲಿ ಪಾರಾಯಣ ಪಠಣ ನಡೆಯಿತು.
ಪಟ್ಟಣದ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ, ವೆಂಕಟೇಶ್ವರ ಸ್ತೋತ್ರ, ವಾಯುಸ್ತುತಿ, ರಾಯರ ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆಸಲಾಯಿತು. ರಾಯರ ಮಠದಲ್ಲಿ ಕಲ್ಯಾಣರಾವ್ ಕುಲಕರ್ಣಿ ಕಣಮೇಶ್ವರ ಅವರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಿದರು.
ಕಲಬುರ್ಗಿ ಹಂಸನಾಮ ಪಾರಾಯಣ ಸಮಿತಿ ಅಧ್ಯಕ್ಷ ಪದ್ಮನಾಭಾಚಾರ್ಯ ಜೋಶಿ, ಲಕ್ಷ್ಮಿ ನಾರಾಯಣ ಪಾರಾಯಣ ಸಮಿತಿ ಅಧ್ಯಕ್ಷ ರವೀಂದ್ರ ಲಾತುರಕರ್, ರಾಯರ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ರಮೇಶಬಾಬು ವಕೀಲ, ಕಾರ್ಯದರ್ಶಿ ಶಾಮರಾವ್ ರೇವನೂರ್, ಶೇಷಾ ಚಾರ್ಯ ಜೋಶಿ, ಪತ್ರಕರ್ತ ಶೇಷ ಮೂರ್ತಿ ಅವಧಾನಿ, ದತ್ತಾತ್ರಯರಾವ್ ಕುಲಕರ್ಣಿ ಕೋಳಕೂರ, ಲಕ್ಷ್ಮಣರಾವ್ ಆಲಬಾಳ, ಅಪ್ಪಣ್ಣಗೌಡ ಕೂಟನೂರ್, ಪಾಂಡುರಂಗ ಅವರಾದ್, ಸುಧೀಂದ್ರ ವಕೀಲ, ದತ್ತಾತ್ರಯರಾವ್ ರೇವನೂರ್, ಯಾದವೇಂದ್ರ ಜೋಶಿ, ರಮೇಶ ಮಠ, ವಿಪ್ರರು, ಮಹಿಳೆಯರು ಪಾರಾಯಣ ದಲ್ಲಿ ಪಾಲ್ಗೊಂಡರು.