ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ 7 ಹೊಸ ಜಿಲ್ಲೆಗಳು ರಚನೆಯಾದವು. ಅದಾಗಿ 20 ವರ್ಷಗಳು ಆಗಿವೆ. ಅದರ ಏಳಿಗೆ, ಆಗು–ಹೋಗುಗಳ ಕುರಿತಾಗಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸುತ್ತಿರುವುದು ಶ್ಲಾಘನೀಯ! ಜಿಲ್ಲೆಗಳ ರಚನೆಯ ಉದ್ದೇಶ ಸಾರ್ಥಕವಾಗಲು ಅಲ್ಲಿನ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಆಡಳಿತ ಬದ್ಧತೆಯಿಂದ ಶ್ರಮಿಸಬೇಕು. ಇಲ್ಲದೇ ಹೋದರೆ ಹೆಸರಿಗೆ ಅಷ್ಟೆ ಜಿಲ್ಲಾ ಕೇಂದ್ರವಾಗಿ ಉಳಿಯುತ್ತವೆ.
–ಬಿ. ಮೋಹಿದ್ದೀನ್ ಖಾನ್, ಚಿತ್ರದುರ್ಗ